ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ವಿಜಯನಗರ ರಾಜಧಾನಿ ಆಗುತ್ತೆ ಎಂಬ ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನಂದ್ ಸಿಂಗ್ ಅವರ ಕಿವಿ ಹಿಂಡಿ ಬುದ್ದಿ ಹೇಳಬೇಕು ಎಂದರು.
ಆನಂದ್ ಸಿಂಗ್ ಹೇಳಿಕೆ ದುರದೃಷ್ಟಕರ. ಈ ರೀತಿ ಹೇಳಿಕೆ ನೀಡುವ ಸಚಿವರಿಗೆ ಕರ್ನಾಟಕ ಏಕೀಕರಣದ ಕಲ್ಪನೆ ಇಲ್ಲ. ಹಂಚಿಹೋಗಿದ್ದ ಕರ್ನಾಟಕ ಪ್ರದೇಶ ಹೇಗೆ ಒಂದಾಯ್ತು ಎಂಬುದೇ ಗೊತ್ತಿಲ್ಲ. 19ನೇ ಶತಮಾನದ ಆರಂಭದಿಂದ ನಮ್ಮ ಹಿರಿಯರು ಹೋರಾಟ ಮಾಡಿ 1956ರಲ್ಲಿ ಕನಸು ನನಸು ಮಾಡಿಕೊಂಡರು. ಸಚಿವರಿಗೆ ಈ ಹೋರಾಟದ ಪರಿಕಲ್ಪನೆಯೇ ಇಲ್ಲ ಎಂದರು.