ಕರ್ನಾಟಕ

karnataka

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬ್ಯಾನರ್ ಹಿಂದಿಮಯ.. ಮಸಿ ಬಳಿದ ಕನ್ನಡ ಪರ ಹೋರಾಟಗಾರರು

ಬ್ಯಾನರ್​ನಲ್ಲಿ ಹಿಂದಿ ಭಾಷೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ಅವರ ಫೋಟೋ ಇದ್ದಂತಹ ಬ್ಯಾನರ್​ಗೆ ನವಕರ್ನಾಟಕ ಕನ್ನಡ ಸೇನೆಯವರು ಮಸಿ ಬಳಿದಿದ್ದಾರೆ.

By

Published : Nov 26, 2022, 2:10 PM IST

Published : Nov 26, 2022, 2:10 PM IST

Kn_dvg_
ರಾಜೀವ್ ಚಂದ್ರಶೇಖರ್ ಬ್ಯಾನರ್​ಗೆ ಮಸಿ

ದಾವಣಗೆರೆ: ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ ಬ್ಯಾನರ್ ಹಿಂದಿಮಯವಾಗಿದ್ದರಿಂದ ಕನ್ನಡ ಪರ ಹೋರಾಟಗಾರರು ಬ್ಯಾನರ್​ಗೆ ಮಸಿ ಬಳಿದಿರುವ ಘಟನೆ ನಡೆದಿದೆ.

ನಗರದ ನಿಜಲಿಂಗಪ್ಪ ಲೇಔಟ್​ನ ಜಿಲ್ಲಾಧಿಕಾರಿ ನಿವಾಸದ ಸಮೀಪವಿರುವ ರಿಂಗ್ ರಸ್ತೆಯ ಬಳಿ ಹಾಕಿದ್ದ ಬ್ಯಾನರ್​ಗೆ ಮಸಿ ಬಳೆಯಲಾಗಿದೆ. ಶುಕ್ರವಾರದಂದು ದಾವಣಗೆರೆಯ ಜೆ ಎಚ್ ಪಟೇಲ್ ಬಡಾವಣೆಯಲ್ಲಿ ನೂತನವಾಗಿ 63ನೇಯ ಎಸ್​ಟಿಪಿಐ ಉಪ ಕೇಂದ್ರ ಉದ್ಘಾಟನೆಗಾಗಿ ರಾಜೀವ್​ ಚಂದ್ರಶೇಖರ್​ ಅವರ ಬ್ಯಾನರ್ ಅಳವಡಿಸಲಾಗಿದೆ. ಕಾರ್ಯಕ್ರಮಕ್ಕೆ ಸಚಿವ ರಾಜೀವ್ ಚಂದ್ರಶೇಖರ್ ಅವರು ಗೈರಾಗಿದ್ದ ಕಾರಣ ವರ್ಚುವಲ್​ ಮೂಲಕ ಉದ್ಘಾಟನೆ ಮಾಡಿದ್ದರು. ಆದರೇ ಬ್ಯಾನರ್​ನಲ್ಲಿ ಕನ್ನಡ ಬದಲಿಗೆ ಹಿಂದಿ ಭಾಷೆಯನ್ನು ಬರೆದು ಸ್ವಾಗತ ಕೋರಲಾಗಿತ್ತು.

ಈ ಹಿನ್ನೆಲೆ ಬ್ಯಾನರ್​ನಲ್ಲಿದ್ದ ರಾಜೀವ್ ಚಂದ್ರಶೇಖರ್​ ಅವರ ಹೆಸರಿಗೆ ನವಕರ್ನಾಟಕ ಕನ್ನಡ ಸೇನೆ ದಾವಣಗೆರೆ ಜಿಲ್ಲಾ ಘಟಕದವರು ಮಸಿ ಬಳಿದಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡ ಅಕ್ಷರ ಬಳಸುವುದನ್ನು ಬಿಟ್ಟು ಹಿಂದಿ ಬಳಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:ಬಹು ವರ್ಷಗಳ ಕನಸು ನನಸು: ದಾವಣಗೆರೆಯಲ್ಲಿ ಆರಂಭವಾಯಿತು ಎಸ್​ಟಿಪಿಐ ಉಪಕೇಂದ್ರ

ABOUT THE AUTHOR

...view details