ಬೆಳಗಾವಿ: ಮಲಪ್ರಭಾ ನದಿಯಲ್ಲಿ ಅರೆಕಾಲಿಕ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜನರೀಗ ಕೊರೊನಾ ಹೊಡೆತಕ್ಕೆ ದಿಕ್ಕೇ ತೋಚದಂತಾಗಿದ್ದಾರೆ.
ಕೊರೊನಾ ಎಫೇಕ್ಟ್ : ಮೀನು ಹಿಡಿದು ಜೀವನಸಾಗಿಸುತ್ತಿದ್ದ ಜನರಿಗೆ ಈಗ ಮೀನೆ ಇವರ ದಿನ ನಿತ್ಯದ ಆಹಾರ - making a living are now their daily food
ಮಲಪ್ರಭಾ ನದಿಯಲ್ಲಿ ಕೆಂಗಾನೂರ ಗ್ರಾಮದ ಭೋವಿ ಸಮಾಜದ ಜನರು ಹಲವು ವರ್ಷಗಳಿಂದ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಗ ಮನೆಯಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಕೈಯಲ್ಲಿ ಹಣ ಇಲ್ಲದರಿಂದ ಪ್ರತಿದಿನ ಮೀನು ಹಿಡಿದು ತಿನ್ನುವ ದುಸ್ಥಿತಿ ನಿರ್ಮಾಣವಾಗಿದೆ.

ಮನೆಯಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಕೈಯಲ್ಲಿ ಹಣ ಇಲ್ಲದರಿಂದ ಪ್ರತಿದಿನ ಮೀನು ಹಿಡಿದು ತಿನ್ನುವ ದುಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಹಾದುಹೋಗಿರುವ ಮಲಪ್ರಭಾ ನದಿಯಲ್ಲಿ ಕೆಂಗಾನೂರ ಗ್ರಾಮದ ಭೋವಿ ಸಮಾಜದ ಜನರು ಹಲವು ವರ್ಷಗಳಿಂದ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಆದರೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ತಡೆಯಲು ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಕೈಯಲ್ಲಿ ಹಣವಿಲ್ಲ. ಇದರಿಂದಾಗಿ ಈ ಮೀನುಗಾರರು ಗ್ರಾಮಕ್ಕೆ ಕೂಗಳತೆ ದೂರದಲ್ಲಿರುವ ಮಲಪ್ರಭಾ ನದಿಗೆ ಆಗಮಿಸಿ, ತಮ್ಮ ಕುಟುಂಬಕ್ಕೆ ತಮ್ಮಗೆ ಅಗತ್ಯವಿರುವಷ್ಟು ಮೀನನ್ನು ಬಲೆ ಹಾಕಿ ಹಿಡಿದು ತೆಗೆದುಕೊಂಡು ಹೋಗುತ್ತಿದ್ದಾರೆ.