ಕರ್ನಾಟಕ

karnataka

By

Published : Aug 28, 2022, 5:32 PM IST

ETV Bharat / state

Asia Cup 2022: ​ಭಾರತದ ಗೆಲುವಿಗೆ ಮುಸ್ಲಿಂ ಸಮುದಾಯದಿಂದ‌ ದರ್ಗಾದಲ್ಲಿ ಪ್ರಾರ್ಥನೆ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ಬೆಳಗಾವಿಯ ಬಾಬಾ ಬದರುದಿನಶಾ ವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

Muslim community prays in Dargah for India victory
​ಭಾರತದ ಗೆಲುವಿಗೆ ಮುಸ್ಲಿಂ ಸಮುದಾಯದಿಂದ‌ ದರ್ಗಾದಲ್ಲಿ ಪ್ರಾರ್ಥನೆ

ಬೆಳಗಾವಿ: ಇಂದು ಭಾರತ ಮತ್ತು ಪಾಕಿಸ್ತಾನ‌ ನಡುವೆ ಏಷ್ಯಾ ಕಪ್ ಹೈವೋಲ್ಟೇಜ್ ಮ್ಯಾಚ್​ ನಡೆಯಲಿದೆ. ಇದರಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಲಿ ಎಂದು ಬೆಳಗಾವಿಯ ದರ್ಗಾವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ಬಾಬಾ ಬದರುದಿನಶಾ ವಲಿ ದರ್ಗಾದಲ್ಲಿ ಮುಸ್ಲಿಂ ಸಮುದಾಯದ ಯವಕರು, ಕಾಂಗ್ರೆಸ್ ಸೇವಾದಳದ ಯಂಗ್ ಬ್ರಿಗೇಡ್ ಕಾರ್ಯಕರ್ತರು ಭಾರತದ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

​ಭಾರತದ ಗೆಲುವಿಗೆ ಮುಸ್ಲಿಂ ಸಮುದಾಯದಿಂದ‌ ದರ್ಗಾದಲ್ಲಿ ಪ್ರಾರ್ಥನೆ

ದರ್ಗಾದ ಮುಲ್ಲಾ ರಫೀಕ್ ಮುಜಾವರ, ಯಂಗ್ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಇರ್ಫಾನ್ ಅತ್ತಾರ, ತಾಜಮುಲ್ಲಾ ಬಾಕ್ಸಿ, ವಾಸೀಂ ನದಾಫ್​ ಸೇರಿದಂತೆ ಭಾರತದ ತಂಡದ ಅಭಿಮಾನಿಗಳು ಇದ್ದರು.

ಇದನ್ನೂ ಓದಿ: ಹುಬ್ಬಳ್ಳಿ: ಭಾರತ ತಂಡದ ಗೆಲುವಿಗಾಗಿ ಫತೇ ಷಾ ವಲಿ ದರ್ಗಾದಲ್ಲಿ ಪ್ರಾರ್ಥನೆ

ABOUT THE AUTHOR

...view details