ಕರ್ನಾಟಕ

karnataka

ETV Bharat / state

'ಅದು ಕೇಂದ್ರಕ್ಕೆ ಬಿಟ್ಟ ವಿಷಯ, ಆ ವಿಚಾರ‌ ಮಾತನಾಡುವಷ್ಟು ದೊಡ್ಡವನಲ್ಲ'

ದಿನ ಬಳಕೆ ಸಾಮಗ್ರಿಗಳ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್, 'ಅದು ಕೇಂದ್ರಕ್ಕೆ ಬಿಟ್ಟ ವಿಚಾರ, ಆ ವಿಚಾರವಾಗಿ‌ ಮಾತನಾಡುವಷ್ಟು ದೊಡ್ಡವನಲ್ಲ. ನಾವು ನಮ್ಮ ಇಲಾಖೆ ಕಡೆ ಹೆಚ್ಚಿನ ಗಮನ ಹರಿಸೋಣ' ಎಂದಿದ್ದಾರೆ.

By

Published : Feb 26, 2021, 5:59 PM IST

minister-shrimanth-patil-talks-about-check-post-in-karnataka-border
ಸಚಿವ ಶ್ರೀಮಂತ ಪಾಟೀಲ್

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಗಡಿ ಭಾಗದಲ್ಲಿ ಚೆಕ್​​ಪೋಸ್ಟ್​ ನಿರ್ಮಾಣ ಮಾಡಲಾಗಿದೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್​ ತಿಳಿಸಿದ್ದಾರೆ.

ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವಿವಿಧ ಕಾಮಗಾರಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸದ್ಯ ಕಾಗವಾಡ - ಮಿರಜ, ಗಣೇಶವಾಡಿ - ಕಾಗವಾಡದಲ್ಲಿ ಚೆಕ್​ಪೋಸ್ಟ್ ನಿರ್ಮಿಸಲಾಗಿದ್ದು, ಇನ್ನು ಹಲವೆಡೆ ನಿರ್ಮಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಎಂದರು.

ಸಚಿವ ಶ್ರೀಮಂತ ಪಾಟೀಲ್

ತಾಲೂಕಿನ ಬೊರಗಾಂವ್​ನಲ್ಲಿ ಕೆಲ ಟೆಕ್ಸ್​ಟೈಲ್ಸ್​‌ ಮಾಲೀಕರು ತಮ್ಮ ಉದ್ಯಮ ನಡೆಸಲಾಗದೇ ಬೇರಯವರಿಗೆ ಬಾಡಿಗೆ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಹಿಂದೆ ನಾನೂ ಬೊರಗಾಂವ್​ಗೆ ಹೋಗಿದ್ದೆ, ಆಗ ಮಾಲೀಕರೆ ಟೆಕ್ಸ್​ಟೈಲ್ಸ್​ ನಡೆಸುತ್ತಿದ್ದರು. ಈ ಬಗ್ಗೆ ನಾನೂ ಕೂಡಾ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

ಓದಿ:'ಇಲ್ಲೇ ಹೀಗೆ ವರ್ತಿಸಿದ್ರೆ, ಜನರಿಗೆ ನೀವೇನು ನ್ಯಾಯ ಒದಗಿಸುತ್ತೀರಿ?'

ದಿನ ಬಳಕೆ ಸಾಮಗ್ರಿಗಳ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಅದು ಕೇಂದ್ರಕ್ಕೆ ಬಿಟ್ಟ ವಿಚಾರ, ಆ ವಿಚಾರವಾಗಿ‌ ಮಾತನಾಡುವಷ್ಟು ದೊಡ್ಡವನಲ್ಲ, ನಾವು ನಮ್ಮ ಇಲಾಖೆ ಕಡೆ ಹೆಚ್ಚಿನ ಗಮನ ಹರಿಸೋಣ ಎಂದರು.

For All Latest Updates

TAGGED:

ABOUT THE AUTHOR

...view details