ಕರ್ನಾಟಕ

karnataka

By

Published : Dec 5, 2020, 6:58 PM IST

ETV Bharat / state

ಮರಾಠ ಅಭಿವೃದ್ಧಿ ನಿಗಮ ರಚನೆ: ಸಮುದಾಯದ ಮುಖಂಡರಿಂದ ಬಿಎಸ್​​ವೈಗೆ ಸನ್ಮಾನ

ಸಿಎಂ ಬಿಎಸ್​​ವೈ ತಂಗಿದ್ದ ಖಾಸಗಿ ಹೋಟೆಲ್​​ನಲ್ಲಿ ಭೇಟಿ ಮಾಡಿದ ಮರಾಠ ಸಮುದಾಯದ ಮುಖಂಡರು ಸಿಎಂಗೆ ಅಭಿನಂದನೆ ಸಲ್ಲಿಸಿದರು. ಕಳೆದ ಹಲವು ವರ್ಷಗಳ ಮರಾಠಿ ಸಮುದಾಯದ ಬೇಡಿಕೆಗೆ ಸ್ಪಂದಿಸಿದ ಯಡಿಯೂರಪ್ಪನವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Maratha  community leaders Good luck for cm bsy
ಬಿಎಸ್​​ವೈಗೆ ಸನ್ಮಾನ

ಬೆಳಗಾವಿ: ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದ್ದಕ್ಕಾಗಿ ಸಮುದಾಯದ ಮುಖಂಡರಿಂದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಛತ್ರಪತಿ ಶಿವಾಜಿ ಮೂರ್ತಿ ನೀಡಿ ಸನ್ಮಾನಿಸಲಾಯಿತು.

ಬಿಎಸ್​​ವೈಗೆ ಸನ್ಮಾನ

ನಗರದಲ್ಲಿ ಸಿಎಂ ಬಿಎಸ್​​ವೈ ತಂಗಿದ್ದ ಖಾಸಗಿ ಹೋಟೆಲ್​​ನಲ್ಲಿ ಭೇಟಿ ಮಾಡಿದ ಮರಾಠ ಸಮುದಾಯದ ಮುಖಂಡರು, ಸಿಎಂಗೆ ಅಭಿನಂದನೆ ಸಲ್ಲಿಸಿದರು. ಕಳೆದ ಹಲವು ವರ್ಷಗಳ ಮರಾಠಿ ಸಮುದಾಯದ ಬೇಡಿಕೆಗೆ ಸ್ಪಂದಿಸಿದ ಯಡಿಯೂರಪ್ಪನವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆದರೆ ಮರಾಠ ನಿಗಮ ರಚನೆ ವಿರೋಧಿಸಿ ಇಂದು ಕರ್ನಾಟಕ ಬಂದ್​​ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು. ಆದರೆ ಬಂದ್​ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾರ್ಯಕಾರಿಣಿ ಸಭೆಯಲ್ಲಿ ಎರಡು ನಿರ್ಣಯ ಕೈಗೊಂಡಿದ್ದೇವೆ: ಕಟೀಲ್

ABOUT THE AUTHOR

...view details