ಅಥಣಿ(ಬೆಳಗಾವಿ): ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಮಾಜಿ ಸಚಿವ ಎಂ ಬಿ ಪಾಟೀಲ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ತೀರ್ಥ ಗ್ರಾಮದಲ್ಲಿ ಪ್ರಚಾರ ನಡೆಸಿದರು.
ಮಹೇಶ್ ಕುಮಟಳ್ಳಿ ವಿರುದ್ಧ ಎಂ ಬಿ ಪಾಟೀಲ್ ವಾಗ್ದಾಳಿ - Former Minister M B Patil election campaign
ಇಲ್ಲಿ ನೀವು ಕಷ್ಟ ಪಡುತ್ತಿದ್ದರೆ, ಅನರ್ಹರು ಬಾಂಬೆಯಲ್ಲಿ ಆರಾಮವಾಗಿ ಇದ್ರು, ನಿಮಗೆ ಮೋಸ ಮಾಡಿದ ಮನುಷ್ಯನನ್ನು ಊರಿನ ಒಳಗಡೆ ಪ್ರವೇಶ ಕೋಡಬೇಡಿ ಎಂದು ಎಂ ಬಿ ಪಾಟೀಲ್, ಮಹೇಶ್ ಕುಮ್ಟಳ್ಳಿ ವಿರುದ್ಧ ಹರಿಹಾಯ್ದರು.

ಎಂ ಬಿ ಪಾಟೀಲ್
ಪ್ರಚಾರದ ವೇಳೆ ಮಹೇಶ್ ಕುಮಟಳ್ಳಿ ವಿರುದ್ಧ ಮಾತನಾಡಿದ ಎಂ ಬಿ ಪಾಟೀಲ್, ಇಲ್ಲಿ ನಿವು ಕಷ್ಟ ಪಡುತ್ತಿದ್ದರೆ, ಅನರ್ಹರು ಬಾಂಬೆಯಲ್ಲಿ ಆರಾಮವಾಗಿ ಇದ್ರು, ನಿಮಗೆ ಮೋಸ ಮಾಡಿದ ಮನುಷ್ಯನನ್ನು ಊರಿನ ಒಳಗಡೆ ಪ್ರವೇಶ ಕೋಡಬೇಡಿ ಎಂದು ಹರಿಹಾಯ್ದರು.
ಮಹೇಶ್ ಕುಮಟಳ್ಳಿ ವಿರುದ್ಧ ಹರಿಹಾಯ್ದ ಎಂ ಬಿ ಪಾಟೀಲ್
ದಿನದಿಂದ ದಿನಕ್ಕೆ ಅಥಣಿಯಲ್ಲಿ ಪ್ರಚಾರ ರಂಗೇರುತ್ತಿದ್ದು, ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸುತ್ತಿದ್ದಾರೆ.