ಕರ್ನಾಟಕ

karnataka

ETV Bharat / state

ಐದು ವರ್ಷಗಳಿಂದ ರಸ್ತೆ ಮೇಲೆ ಚರಂಡಿ ನೀರು: ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸ್ಥಳೀಯರು - sewage water epidemic road

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಚರಂಡಿ ಇಲ್ಲದೇ ರಸ್ತೆಯ ಮೇಲೆ ಸ್ನಾನದ ನೀರು, ಶೌಚಾಲಯದ ನೀರು ಹರಿದು ಹೋಗುತ್ತಿದೆ‌. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದರೆ ಹಣ ಇಲ್ಲ ಹಾಗೂ ಗ್ರಾಮ ಪಂಚಾಯತಿ‌ ಮೇಲೆ ಸ್ಟೇ ಇದೆ ಎಂದು ಹೇಳುತ್ತಿದ್ದಾರಂತೆ.

Locals in fear sewage water epidemic road for five years
ಐದು ವರ್ಷಗಳಿಂದ ರಸ್ತೆ ಮೇಲೆ ಚರಂಡಿ ನೀರು, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸ್ಥಳೀಯರು

By

Published : Sep 17, 2020, 2:41 PM IST

ಚಿಕ್ಕೋಡಿ:ಕಳೆದ ನಾಲ್ಕೈದು ವರ್ಷಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿದು ಹೋಗುತ್ತಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ನಾವೇ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ಮಾಡಿ ಕೊಟ್ಟಂತಾಗುತ್ತಿದೆ ಎಂದು ಗ್ರಾಮದ ಸ್ಥಳೀಯರು ಅಳಲು ತೊಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಚರಂಡಿ ಇಲ್ಲದೇ ರಸ್ತೆಯ ಮೇಲೆ ಸ್ನಾನದ ನೀರು, ಶೌಚಾಲಯದ ನೀರು ಹರಿದು ಹೋಗುತ್ತಿದೆ‌. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದರೆ ಹಣ ಇಲ್ಲ ಹಾಗೂ ಗ್ರಾಮ ಪಂಚಾಯತಿ‌ ಮೇಲೆ ಸ್ಟೇ ಇದೆ ಎಂದು ಹೇಳುತ್ತಿದ್ದಾರೆ. ಸ್ಟೇ ಬಗ್ಗೆ ಕೇಳಿದರೆ ಯಾವುದೇ ದಾಖಲಾತಿ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ದಾದಾ ಕಲ್ಲಪ್ಪ ವಶೆದಾರ ಆರೋಪಿಸಿದ್ದಾರೆ.

ಉದ್ಯೋಗ ಖಾತರಿ ಯೋಜನೆ ಮೂಲಕ ಚರಂಡಿ‌ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಹಣ ಪಡೆದುಕೊಂಡು ಹೋದವರು ಈ ಕಡೆ ಬಂದೇ ಇಲ್ಲ. ಪಕ್ಕದಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಇದೆ. ಇಲ್ಲಿನ ಮಕ್ಕಳಿಗೆ ಈ ಚರಂಡಿ ನೀರಿನಿಂದ ತೊಂದರೆ ಆಗಬಾರದೆಂದು ನಾವೂ ರಸ್ತೆಯ ಮೇಲೆ ಚರಂಡಿ ನೀರು ಬಿಡುತ್ತಿದ್ದೇವೆ.

ಮಕ್ಕಳು ಶಾಲೆಗಳಿಗೆ, ಪಾಲಕರು ಬೇರೆ ಕಡೆ ತೆರಳಬೇಕಾದರೆ ಚರಂಡಿ ನೀರಿನ ಮೇಲೆ ನಡೆದುಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ‌‌. ಆದಷ್ಟು ಬೇಗ ನಮಗೆ ಚರಂಡಿ ನಿರ್ಮಾಣ ಮಾಡಿಕೊಡಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details