ಕರ್ನಾಟಕ

karnataka

ETV Bharat / state

ಗ್ರಾಮವಾಸ್ತವ್ಯದ ಬದಲು ಹುಚ್ಚಾಸ್ಪತ್ರೆಗೆ ಹೋಗಲಿ : ಸಿಎಂ ವಿರುದ್ಧ ಶಾಸಕ ದುರ್ಯೋಧನ 'ಗಧಾಪ್ರಹಾರ'

ನರೇಂದ್ರ ಮೋದಿಯವರ ಸುನಾಮಿ ನೋಡಿ ಮುಖ್ಯಮಂತ್ರಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಗ್ರಾಮ ವಾಸ್ತವ್ಯಕ್ಕೆ ಹೋಗುವುದಕ್ಕಿಂತ ಧಾರವಾಡದಲ್ಲಿರುವ ಮಾನಸಿಕ ರೋಗಿಗಳ ಆಸ್ಪತ್ರೆಗೆ ಹೋಗಲಿ ಎಂದು, ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವ್ಯಂಗ್ಯವಾಡಿದ್ದಾರೆ.

By

Published : Jun 27, 2019, 8:57 PM IST

ಬಿಜೆಪಿ ಶಾಸಕ ದುರ್ಯೋಧನ ಐಹೊಳೆ

ಬೆಳಗಾವಿ: ನರೇಂದ್ರ ಮೋದಿಯವರ ಸುನಾಮಿ ನೋಡಿ ಮುಖ್ಯಮಂತ್ರಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದು, ಗ್ರಾಮ ವಾಸ್ತವ್ಯಕ್ಕೆ ಹೋಗುವುದಕ್ಕಿಂತ ಧಾರವಾಡದಲ್ಲಿರುವ ಮಾನಸಿಕ ರೋಗಿಗಳ ಆಸ್ಪತ್ರೆಗೆ ಹೋಗಲಿ ಎಂದು, ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಶಾಸಕ ದುರ್ಯೋಧನ ಐಹೊಳೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ, ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜ್ಯದ ಕಡೆ ಗಮನಹರಿಸಿಲ್ಲ. ಈಗ ಪ್ರಚಾರಕ್ಕಾಗಿ ಮಳೆಗಾಲದಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಕೇವಲ ಒಂದು ಪಕ್ಷಕ್ಕೆ ಸೀಮಿತವಾದಂತೆ ಮಾತನಾಡುತ್ತಿದ್ದಾರೆ. ಜನರು ಮತವನ್ನು ಯಾರಿಗಾದರು ಕೊಟ್ಟರು ಮುಖ್ಯಮಂತ್ರಿ ಅದರ ಬಗ್ಗೆ ಪ್ರಶ್ನೆ ಮಾಡಬಾರದು. ರಾಜ್ಯದ ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದರು.

For All Latest Updates

TAGGED:

ABOUT THE AUTHOR

...view details