ಅಥಣಿ: ಉಪಚುನಾವಣೆ ಹಿನ್ನೆಲೆ ಕೈ ಅಭ್ಯರ್ಥಿ ಪರವಾಗಿ ಸಂಕೋನಟ್ಟಿ ಗ್ರಾಮದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಿರುಸಿನ ಪ್ರಚಾರ ನಡೆಸಿದರು.
ಬಿಜೆಪಿಗೆ ನನ್ನನ್ನೂ ಆಹ್ವಾನಿಸಿದ್ದರು: ಲಕ್ಷ್ಮೀ ಹೆಬ್ಬಾಳ್ಕರ್ ಸ್ಫೋಟಕ ಹೇಳಿಕೆ...! - Lakshmi Hebbalkar campaign in Sankonatti village
ಪ್ರವಾಹ ವೇಳೆ ನಮ್ಮ ಕ್ಷೇತ್ರದಲ್ಲಿ ನಾಲ್ಕು ಸಾವಿರ ಮನೆ ಬಿದ್ದಾಗ ನಾನು, ನನ್ನ ಮಗ, ತಮ್ಮ, ತಾಯಿ ಎಲ್ಲರೂ 44ದಿನ ಕೆಲಸ ಮಾಡಿದ್ದೇವೆ. ಆದರೆ ಮಹೇಶ್ ಕುಮಟಳ್ಳಿ ಬಾಂಬೆ ಪೈವ್ ಸ್ಟಾರ್ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಶಾಸಕಿ ಲಕ್ಷ್ಮೀ ಹೇಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಬಿಜೆಪಿಗೆ ನನ್ನನ್ನೂ ಆಹ್ವಾನಿಸಿದ್ದರು: ಲಕ್ಷ್ಮೀ ಹೆಬ್ಬಾಳ್ಕರ್ ಸ್ಫೋಟಕ ಹೇಳಿಕೆ...! ಲಕ್ಷ್ಮೀ ಹೆಬ್ಬಾಳ್ಕರ್, Laxmi Hebbalkar](https://etvbharatimages.akamaized.net/etvbharat/prod-images/768-512-5199530--thumbnail-3x2-nin.jpg)
ಲಕ್ಷ್ಮೀ ಹೆಬ್ಬಾಳ್ಕರ್
ಕಳೆದ ಪ್ರವಾಹದಲ್ಲಿ ನಮ್ಮ ಕ್ಷೇತ್ರದಲ್ಲಿ ನಾಲ್ಕು ಸಾವಿರ ಮನೆ ಬಿದ್ದಾಗ ನಾನು, ನನ್ನ ಮಗ, ತಮ್ಮ, ತಾಯಿ ಎಲ್ಲರೂ 44ದಿನ ಕೆಲಸ ಮಾಡಿದ್ದೇವೆ. ಆದರೆ ಮಹೇಶ್ ಕುಮಟಳ್ಳಿ ಬಾಂಬೆ ಪೈವ್ ಸ್ಟಾರ್ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಹರಿಹಾಯ್ದರು.
ಲಕ್ಷ್ಮೀ ಹೆಬ್ಬಾಳ್ಕರ್
ಕುಮಟಳ್ಳಿ, ಚುನಾವಣೆ ಆದ ಆರೇ ದಿನಕ್ಕೆ ಹೈದರಾಬಾದ್ನಲ್ಲಿ ಸಭೆ ಸೇರಿ ಪಕ್ಷ ಬಿಡುವ ಯೋಚನೆ ಮಾಡಿದ್ದರು. ಬೆಳಗಾವಿಯಲ್ಲಿ ಒಬ್ಬ ದೊಡ್ಡ ಮನುಷ್ಯ ಸಭೆ ಕರೆದಿದ್ದರು. ನನ್ನನ್ನು ಕೂಡ ಕರೆದು ಬಿಜೆಪಿಗೆ ಹೋಗೋಣ ಎಂದರು ಎಂದು ಆಪರೇಷನ್ ಕಲಮದ ಬಗ್ಗೆ ಹೇಳಿದರು.