ಕರ್ನಾಟಕ

karnataka

ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ: ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ

By

Published : Aug 21, 2020, 4:08 PM IST

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕೊಯ್ನಾ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ರಾಜ್ಯದ ಕೃಷ್ಣಾ ನದಿ ಒಡಲು ತುಂಬಿ ಹರಿಯುತ್ತಿದ್ದು, ಇಂದಿನ ಒಳಹರಿವು 2,06,500 ಕ್ಯೂಸೆಕ್​​ಗಿಂತಲೂ ಹೆಚ್ಚಾಗಿದೆ.

krishna river water level increase to2,06,500cusec
ಕೃಷ್ಣಾ ನದಿ

ಚಿಕ್ಕೋಡಿ :ಮಹಾರಾಷ್ಟ್ರದಲ್ಲಿ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಇಳಿಮುಖವಾಗಿದೆ. ಆದರೆ, ಕಳೆದ ಮೂರು ದಿನದ ಹಿಂದೆ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಕೃಷ್ಣಾ, ವೇದಗಂಗಾ ಮತ್ತು ದೂಧ್​ ಗಂಗಾ ನದಿಗಳು ತುಂಬಿ ಹರಿಯುತ್ತಿವೆ‌.

ಕೃಷ್ಣಾ ನದಿ

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ 1,73,500 ಕ್ಯೂಸೆಕ್, ದೂಧ್​​ಗಂಗಾ ನದಿಯಿಂದ 33,264 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು 2,06,500 ಕ್ಯೂಸೆಕ್​​ಗೂ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ ಎಂದು ಚಿಕ್ಕೋಡಿ ತಹಶೀಲ್ದಾರ್​​ ಶುಭಾಸ್​​ ಸಂಪಗಾಂವಿ ಈಟಿವಿ ಭಾರತ್​​​ಗೆ ಮಾಹಿತಿ ನೀಡಿದ್ದಾರೆ.

ಕೊಯ್ನಾ ಜಲಾಶಯದಿಂದ ಇಂದು ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾಗೂ 2,100 ಕ್ಯೂಸೆಕ್ ನೀರನ್ನು ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆಗೆ ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ಕೊಯ್ನಾ ಜಲಾಶಯ ಶೇ89 ರಷ್ಟು, ವಾರಣಾ ಜಲಾಶಯ ಶೇ92, ರಾಧಾನಗರಿ ಜಲಾಶಯ ಶೇ99, ಕಣೇರ ಜಲಾಶಯ ಶೇ 90, ಧೂಮ ಜಲಾಶಯ ಶೇ94, ಪಾಟಗಾಂವ ಶೇ100, ಧೂದಗಂಗಾ ಶೇ 93ರಷ್ಟು ತುಂಬಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 2,32,000 ಹಾಗೂ ಆಲಮಟ್ಟಿ ಜಲಾಶಯದಿಂದ 2,50,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.

ಮಹಾರಾಷ್ಟ್ರದ ಕೊಯ್ನಾ - 73 ಮಿ.ಮೀ, ನವಜಾ - 138 ಮಿ.ಮೀ, ಮಹಾಬಲೇಶ್ವರ - 105 ಮಿ.ಮೀ, ವಾರಣಾ - 65 ಮಿ.ಮೀ, ಕಾಳಮ್ಮವಾಡಿ - 43 ಮಿ.ಮೀ, ರಾಧಾನಗರಿ - 75 ಮಿ.ಮೀ, ಪಾಟಗಾಂವ - 120 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ABOUT THE AUTHOR

...view details