ಕರ್ನಾಟಕ

karnataka

ETV Bharat / state

ಪ್ರಾಣದ ಹಂಗು ತೊರೆದು ಓಡಾಡುತ್ತಿರುವ ಜನ: ಇನ್ನೂ ಕ್ರಮ ಕೈಗೊಂಡಿಲ್ಲ ತಾಲೂಕಾಡಳಿತ - ಇಂಗಳಿ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜನರು ಪ್ರವಾಹಕ್ಕೆ ಹೆದರಿ ಸೂಕ್ತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಆದರೆ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾದರೂ ಜೀವದ ಹಂಗನ್ನೂ ತೊರೆದು ಸೇತುವೆಗಳ ಮೂಲಕ ತಮ್ಮ ಮನೆ ಸಾಮಗ್ರಿಗಳನ್ನು ಸ್ಥಳಾಂತರಿಸುತ್ತಿದ್ದಾರೆ.

ಪ್ರಾಣದ ಹಂಗು ತೊರೆದು ಓಡಾಡುತ್ತಿರುವ ಜನ
ಪ್ರಾಣದ ಹಂಗು ತೊರೆದು ಓಡಾಡುತ್ತಿರುವ ಜನ

By

Published : Aug 18, 2020, 11:43 AM IST

Updated : Aug 18, 2020, 12:45 PM IST

ಚಿಕ್ಕೋಡಿ: ದಿನದಿಂದ ದಿನಕ್ಕೆ ನದಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜನರು ಪ್ರವಾಹಕ್ಕೆ ಹೆದರಿ ಸೂಕ್ತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಆದರೆ ಈಗಾಗಲೇ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾದರೂ ಜೀವದ ಹಂಗನ್ನೂ ತೊರೆದು ಸೇತುವೆಗಳ ಮೂಲಕ ತಮ್ಮ ಮನೆ ಸಾಮಗ್ರಿಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳ ನಿಯೋಜನೆಗೊಂಡಿಲ್ಲ. ಹೀಗಾಗಿ ಇಂಗಳಿ ಗ್ರಾಮಸ್ಥರು ಹರಿಯುವ ನದಿಯಲ್ಲಿ ತಮ್ಮ ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದ್ದು, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎನ್ನುವುದು ಈಗ ಪ್ರಶ್ನೆಯಾಗಿದೆ.

ಕಳೆದ ಬಾರಿ ಪ್ರವಾಹದಲ್ಲಿ ಇಂಗಳಿ ಗ್ರಾಮದ ಯುವಕನೋರ್ವ ನದಿ ಮಧ್ಯದಲ್ಲಿ ಸಿಕ್ಕಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಇದೆಲ್ಲವೂ ಗ್ರಾಮಸ್ಥರಿಗೆ ಗೊತ್ತಿದ್ದರೂ ಸಹ ಜನರು ಮತ್ತೆ ಹರಿಯುವ ನದಿಯಲ್ಲಿ ಬ್ರಿಡ್ಜ್​​ ದಾಟುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿನ ತಾಲೂಕಾಡಳಿತದ ನಿರ್ಲಕ್ಷ್ಯದಿಂದ ಸ್ಥಳೀಯ ಜನರು ಬೇಕಾಬಿಟ್ಟಿಯಾಗಿ ಹರಿಯುವ ನದಿಯ ಮಧ್ಯದಲ್ಲಿರುವ ಬ್ರಿಡ್ಜ್​​‌ ಮೇಲೆಯೇ ಓಡಾಡುತ್ತಿದ್ದಾರೆ.

ಇನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಹಾಗೂ ಹಿಡಕಲ್ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಗೋಕಾಕ್​ ನಗರದ ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ.

ನಗರ ಹೊರವಲಯದ ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಮಸೀದಿ, ಅಂಗಡಿ ಮುಂಗಟ್ಟುಗಳು ಜಲಾವೃತವಾಗಿವೆ. ಇದಲ್ಲದೇ ಗೋಕಾಕ್ ನಗರದ ಹಳೆಯ ದನದ ಪೇಟೆ ಬಳಿಯ ನೂರಕ್ಕೂ ಅಧಿಕ ಮನೆಗಳು, ಬ್ಯಾಳಿ ಕಾಟಾ ಹಾಗೂ ಮಹಾಲಿಂಗೇಶ್ವರ ನಗರಕ್ಕೆ ನೀರು ನುಗ್ಗಿ ಅಲ್ಲಿನ ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿದ್ದರಿಂದ ಸ್ಥಳೀಯರ ತೀವ್ರ ಪರದಾಟ ನಡೆಸುತ್ತಿದ್ದಾರೆ.

ಕೆಲವರು ಮನೆಯ ವಸ್ತುಗಳನ್ನು ಎತ್ತಿನ ಬಂಡಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಘಟಪ್ರಭಾ ನದಿಗೆ 79,967 ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಕಳೆದ ವರ್ಷವಷ್ಟೇ ಭೀಕರ ಜಲ ಪ್ರಳಯದಿಂದ ತತ್ತರಿಸಿ ಹೋಗಿದ್ದ ಗೋಕಾಕ್ ನಗರ ಈದೀಗ ಮತ್ತೊಮ್ಮೆ ಜಲ ಕಂಟಕ ಭೀತಿ ಎದುರಿಸುವಂತಾಗಿದ್ದು, ಕರದಂಟು ನಗರದ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

Last Updated : Aug 18, 2020, 12:45 PM IST

ABOUT THE AUTHOR

...view details