ಕರ್ನಾಟಕ

karnataka

ETV Bharat / state

ಸಚಿವ ಶ್ರೀಮಂತ ಪಾಟೀಲ ವಿರುದ್ಧ ಕರವೇ ಪ್ರತಿಭಟನೆ - Karave protest against minister Shrimanth patil

ಮರಾಠಿಯಲ್ಲಿ ಭಾಷಣ ಮಾಡಿ ಮರಾಠಿ ಪ್ರೇಮ ಮೆರೆದು ಕನ್ನಡಗರಿಗೆ ಅವಮಾನ ಮಾಡಿರುವ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ..

protest
ಮನವಿ ಸಲ್ಲಿಸಿದ ಕರವೇ

By

Published : Aug 4, 2020, 4:59 PM IST

ಚಿಕ್ಕೋಡಿ :ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗಡಿ ಗ್ರಾಮ ಬಾಲಿಗೇರಿಯಲ್ಲಿ ನಾಡ ವಿರೋಧಿ ಭಾಷಣ ಮಾಡಿದ್ದ ಶ್ರೀಮಂತ ಪಾಟೀಲ್‌ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಾಡ ಕಚೇರಿ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು.

ಎರಡು ದಿನದ ಹಿಂದೆ ಬಾಲಿಗೇರಿ ಗ್ರಾಮದಲ್ಲಿ ನಡೆದಿದ್ದ ಬಸವೇಶ್ವರ ಸಕ್ಕರೆ ಕಾರ್ಖಾನೆ ಭೂಮಿ ಪೂಜೆ ವೇಳೆ ಸಚಿವ ಶ್ರೀಮಂತ ಪಾಟೀಲ್ ಅವರು ಮರಾಠಿಯಲ್ಲಿ ಭಾಷಣ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ವಿರುದ್ದ ಕರವೇ ಪ್ರತಿಭಟನೆ

ಮರಾಠಿಯಲ್ಲಿ ಭಾಷಣ ಮಾಡಿ ಮರಾಠಿ ಪ್ರೇಮ ಮೆರೆದು ಕನ್ನಡಗರಿಗೆ ಅವಮಾನ ಮಾಡಿರುವ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಅವರನ್ನು ಗಡಿ ಪಾರು ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ABOUT THE AUTHOR

...view details