ಕರ್ನಾಟಕ

karnataka

ETV Bharat / state

ಅಥಣಿ: ಕೊರೊನಾ ವಾರಿಯರ್ಸ್​ಗಳಿಗೆ ಕಬಾಸುರಾ ಆಯುರ್ವೇದ ಔಷಧ ವಿತರಣೆ - Ayurvedic medicine distribute

ಅಥಣಿ ಪಟ್ಟಣದ ಕೊರೊನಾ ವಾರಿಯರ್ಸ್​ಗಳಿಗೆ ಡಿಸಿಎಂ ಸವದಿ ಅಭಿಮಾನಿಗಳ ಬಳಗ ಹಾಗೂ ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಕಬಾಸುರ ಆಯುರ್ವೇದ ಔಷಧ ವಿತರಣೆ ಮಾಡಲಾಯಿತು.

Ayurvedic medicine distributed to Corona Warriors
ಕೊರೊನಾ ವಾರಿಯರ್ಸಗಳಿಗೆ ಕಬಾಸುರಾ ಆಯುರ್ವೇದ ಔಷಧಿ ವಿತರಣೆ..

By

Published : Jul 20, 2020, 9:19 AM IST

ಅಥಣಿ: ಕೊರೊನಾ ಸೇನಾನಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ಅಭಿಮಾನಿ ಬಳಗ ಹಾಗೂ ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಶ್ರೀ ಪ್ರತ್ಯಾಂಗಿರ ಪಂಚಮುಖ ವೇದ ಧರ್ಮ ಟ್ರಸ್ಟ್​ ತಯಾರಿಸಿರುವ ರೋಗ ನಿರೋಧಕ ಶಕ್ತಿಯ ವೃದ್ದಿಗಾಗಿ ಕಬಾಸುರ ಆಯುರ್ವೇದಿಕ್ ಚೂರ್ಣವನ್ನು ಉಚಿತವಾಗಿ ವಿತರಿಸಲಾಯಿತು.

ಕೊರೊನಾ ವಾರಿಯರ್ಸಗಳಿಗೆ ಕಬಾಸುರಾ ಆಯುರ್ವೇದ ಔಷಧ ವಿತರಣೆ

ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆ, ಪೊಲೀಸ್​ ಠಾಣೆ, ಪುರಸಭೆ ಸಿಬ್ಬಂದಿ ಸೇರಿದಂತೆ ಪತ್ರಕರ್ತರಿಗೂ ಆಯುರ್ವೇದ ಚೂರ್ಣವನ್ನು ವಿತರಣೆ ಮಾಡಲಾಯಿತು. ಈ ವೇಳೆ, ಮಾತನಾಡಿದ ವಕೀಲ ಸುಶೀಲಕುಮಾರ ಪತ್ತಾರ ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟಿರೀಯಲ್, ಆ್ಯಂಟಿ ಫಂಗಲ್, ಆ್ಯಂಟಿ ಅಸ್ತಮೇಟಿಕ್ ಹಾಗೂ ರಾಸಾಯನಿಕಗಳಿಂದ ಲೀವರ್ ರಕ್ಷಣೆ ಮಾಡುವ ಗುಣವನ್ನು ಹೊಂದಿರುವ ಈ ಆಯುರ್ವೇದ ಚೂರ್ಣವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಅಷ್ಟೇ ಅಲ್ಲದೆ ಸ್ವಾಶಕೋಶಗಳ ಶಕ್ತಿ ಹೆಚ್ಚಿಸಿ ಉಸಿರಾಟ ಸಂಬಂಧಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ.

ಆದ್ದರಿಂದ ಕೊರೊನಾ ವಾರಿಯರ್ಸ್​ಗಳಿಗೆ ಈ ಚೂರ್ಣವನ್ನು ಉಚಿತವಾಗಿ ಹಂಚುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಎಲ್ಲ ಕೊರೊನಾ ವಾರಿಯರ್ಸ್​ಗಳು ಆರೋಗ್ಯ ವೃದ್ದಿಸಿಕೊಳ್ಳಬೇಕು. ಇಂದು ಸುಮಾರು ಒಂದು ಸಾವಿರ ಜನರಿಗೆ ಉಚಿತವಾಗಿ ಈ ಔಷಧವನ್ನು ವಿತರಿಸಲಾಗುವುದು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾಸ್ಕ ಧರಿಸಿ, ಸ್ಯಾನಿಟೈಸರ್​ ಬಳಸಿ ಕೊರೊನಾ ತೊಲಗಿಸಲು ಸಹಕರಿಸಬೇಕು ಎಂದರು.

ABOUT THE AUTHOR

...view details