ಬೆಳಗಾವಿ: ಅದು ಕೇವಲ 2 ತಿಂಗಳ ಹಿಂದಷ್ಟೆ ನಿರ್ಮಿಸಲಾದ ಕಾಂಕ್ರಿಟ್ ರಸ್ತೆ. ಸುಲಭ ಸಂಚಾರಕ್ಕೆ ನೆರವಾಗಬೇಕಿದ್ದ ಈ ರಸ್ತೆಯಿಂದ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ.
ಕಾಂಕ್ರಿಟ್ ರಸ್ತೆಯಲ್ಲೇ ಭಯಾನಕ ಧೂಳು; ಗ್ರಾಮಸ್ಥರ ನರಕಯಾತನೆ - etv bharat
ಬೆಳಗಾವಿ ತಾಲೂಕಿನ ಮತನಾಳ ಗ್ರಾಮದಲ್ಲಿ ನಿರ್ಮಿಸಿದ್ದ ಸಿಮೆಂಟ್ ರಸ್ತೆ ಜನರಿಗೆ ಧೂಳಿನ ಸ್ನಾನ ಮಾಡಿಸುತ್ತಿದೆ. 2 ತಿಂಗಳ ಹಿಂದಷ್ಟೆ ನಿರ್ಮಾಣವಾದ ಈ ರಸ್ತೆ ಬಗ್ಗೆ ಈಗ ದೂರುಗಳು ಹೆಚ್ಚಾಗಿವೆ.
ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಸಿಮೆಂಟ್ ರಸ್ತೆ ದುರಸ್ತಿಗೊಳಿಸಲು ಆಗ್ರಹಿಸಿ ಪ್ರತಿಭಟನಾಕಾರರು ರಸ್ತೆ ಕೂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ತಾಲೂಕಿನ ಮುತನಾಳ ಗ್ರಾಮದಲ್ಲಿನ ಕಾಂಕ್ರೀಟ್ ರಸ್ತೆ ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ರಸ್ತೆಯಲ್ಲಿ ಕಸ ಹೊಡೆದರೆ ಸಾಕು ಸಂಪೂರ್ಣ ಧೂಳುಮಯವಾಗುತ್ತಿದೆ. ಇನ್ನೂ ಭಾರಿ ವಾಹನಗಳ ಸಂಚಾರದಿಂದಾಗಿ ದಟ್ಟ ಹೊಗೆ ಆವರಿಸಿದಂತೆ ಧೂಳು ಮುತ್ತಿಕ್ಕಿಕೊಳ್ಳುತ್ತದೆ.
ಗ್ರಾಮಸ್ಥರು ಪೊರಕೆ ಹಿಡಿದು ಮುತನಾಳ ಪಂಚಾಯಿತಿಗೆ ಮುತ್ತಿಗೆ ಹಾಕಿ, ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದ್ದಾರೆ.