ಬೆಳಗಾವಿ: ಎಂ.ಸ್ಯಾಂಡ್ ಸಾಗಣಿಕೆ ಮಾಡುವ ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಕಂಪನಿ ಕೊಡುವ ಪಾಸ್ ಸಮಯ ಹೆಚ್ಚಳ ಮಾಡುವುದೂ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಜೈ ಭೀಮ್ ಓಂ ಸಾಯಿ ಕಮರ್ಷಿಯಲ್ ವಾಹನಗಳ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜೈ ಭೀಮ್ ಓಂ ಸಾಯಿ ಕಮರ್ಷಿಯಲ್ ವಾಹನಗಳ ಮಾಲೀಕರ ಸಂಘದ ಪದಾಧಿಕಾರಿಗಳು, ಎಂ.ಸ್ಯಾಂಡ್ ಕಂಪನಿಗಳಿಂದ ಪಾಸ್ ಸಮಯ ಹೆಚ್ಚಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣಿಕೆ ಹೆಚ್ಚಾಗುತ್ತಿದೆ. ಇದರಿಂದ ಅಧಿಕೃತವಾಗಿ ಪಾಸ್ ಪಡೆದುಕೊಂಡು ಮರಳು ಸಾಗಣಿಕೆ ಮಾಡುತ್ತಿರುವ ನಮಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು. ಡಿಸೇಲ್ ಇನ್ಶೂರೆನ್ಸ್ ಟ್ಯಾಕ್ಸ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.