ಚಿಕ್ಕೋಡಿ (ಬೆಳಗಾವಿ):ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಏರಿಕೆಯಾಗಿದೆ. 1,19,000 ಅಧಿಕ ಕ್ಯೂಸೆಕ್ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ ಎಂದು ಚಿಕ್ಕೋಡಿ ತಹಶೀಲ್ದಾರ್ ಶುಭಾಸ ಸಂಪಗಾಂವಿ ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ನಿಂದ 1,04,000 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 15,616 ಕ್ಯೂಸೆಕ್ ನೀರು ಹೀಗೆ ಒಟ್ಟು 1,19,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ.
ನದಿಗಳ ಒಳ ಹರಿವಿನಲ್ಲಿ ಏರಿಕೆ ಮಹಾರಾಷ್ಟ್ರದ ಕೊಯ್ನಾ - 18 ಮಿ.ಮೀ, ನವಜಾ - 18 ಮಿ.ಮೀ, ಮಹಾಬಲೇಶ್ವರ - 12 ಮಿ.ಮೀ, ವಾರಣಾ - 15 ಮಿ.ಮೀ, ಸಾಂಗಲಿ - 07 ಮಿ.ಮೀ, ಕೊಲ್ಲಾಪೂರ - 25 ಮಿ.ಮೀ ಕಾಳಮ್ಮವಾಡಿ - 26 ಮಿ.ಮೀ, ರಾಧಾನಗರಿ - 45 ಮಿ.ಮೀ, ಪಾಟಗಾಂವ - 73 ಮಿ.ಮೀ ಮಳೆಯಾಗಿದ್ದು, ಕಳೆದೆರಡು ದಿನಗಳ ಮಳೆಗೆ ಹೋಲಿಸಿದರೆ ಇಂದು ಮಹಾರಾಷ್ಟ್ರದಲ್ಲಿ ಕಡಿಮೆ ಮಳೆಯಾಗಿರುವ ವರದಿಯಾಗಿದೆ.
ಚಿಕ್ಕೋಡಿ - 5.0 ಮಿ.ಮೀ, ಅಂಕಲಿ - 5.0 ಮಿ.ಮೀ, ನಾಗರಮುನ್ನೊಳಿ - 2.8 ಮಿ.ಮೀ, ಸದಲಗಾ - 6.4 ಮಿ.ಮೀ, ಜೋಡಟ್ಟಿ - 4.4 ಮಿ.ಮೀ ಮಳೆಯಾಗಿದ್ದು, ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದೆರೆಡು ದಿನಗಳಿಗೆ ಹೋಲಿಸಿದರೆ ಮಳೆ ಕಡಿಮೆಯಾಗಿರುವ ವರದಿಯಾಗಿದೆ. ಹಿಪ್ಪರಗಿ ಬ್ಯಾರೆಜ್ನಿಂದ 1,45,000 ಹಾಗೂ ಆಲಮಟ್ಟಿ ಜಲಾಶಯದಿಂದ 1,50,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ.