ಕರ್ನಾಟಕ

karnataka

ETV Bharat / state

7 ಬಾರಿ ಗೆದ್ದವನಿಗೆ 8ನೇ ಬಾರಿ ಗೆಲ್ಲುವುದೇನು ದೊಡ್ಡ ವಿಷಯವಲ್ಲ: ಪ್ರಕಾಶ್​​ ಹುಕ್ಕೇರಿ

2018ರಲ್ಲಿ ಈ ಕ್ಷೇತ್ರಕ್ಕೆ ನರೇಂದ್ರ ಮೋದಿ ಬಂದಿದ್ದರು. ಅವರು ಬಂದು ಹೋದ ಮೇಲೆ ಮತ್ತೆ ಎರಡು ಕ್ಷೇತ್ರದಲ್ಲಿ ಹೆಚ್ಚಿನ ಸೀಟುಗಳು ಕಾಂಗ್ರೆಸ್​​ಗೆ ಬಂದಿವೆ. ಚಿಕ್ಕೋಡಿ ಕ್ಷೇತ್ರದಲ್ಲಿ ಅವರ ಹವಾ ಇಲ್ಲ ಎಂದು ಮೋದಿ ಬಗ್ಗೆ ಪ್ರಕಾಶ್​ ಹುಕ್ಕೇರಿ ವ್ಯಂಗ್ಯವಾಡಿದರು.

By

Published : Apr 4, 2019, 12:32 PM IST

ಪ್ರಕಾಶ್​ ಹುಕ್ಕೇರಿ

ಚಿಕ್ಕೋಡಿ: ಎಂಟು ಬಾರಿ ನಾಮಪತ್ರ ಸಲ್ಲಿಕೆ ಮಾಡಿ ಏಳು‌ ಬಾರಿ ವಿಜಯಶಾಲಿಯಾಗಿದ್ದೇನೆ. ಏಳು ಬಾರಿ ಗೆದ್ದವನಿಗೆ ಎಂಟನೇ ಬಾರಿ ಗೆಲ್ಲುವುದೇನು ದೊಡ್ಡ ವಿಷಯ ಅಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್​ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್​ ಹುಕ್ಕೇರಿ

ಚಿಕ್ಕೋಡಿ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, 1988ರಲ್ಲಿ ವಿಧಾನ ಪರಿಷತ್ ಸದಸ್ಯನಾಗಿ, 1994 - 2013ರವರೆಗೆ ಆರು ಬಾರಿ ವಿಧಾನಸಭಾ ಸದಸ್ಯನಾಗಿ ಹಾಗೂ 2014ರಲ್ಲಿ ಲೋಕಸಭಾ ಸದಸ್ಯನಾಗಿ ನಾಮಪತ್ರ ಸಲ್ಲಿಸಿದ್ದೇನೆ. 2019ರಲ್ಲಿ ಎಂಟನೇ ಬಾರಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನಾನು ಸೊಲ್ಲಿಲದ ಸರದಾರ. ನಾನು ಮತ್ತೆ ಈ ಬಾರಿ ವಿಜಯಶಾಲಿಯಾಗಿ ಜನರ ಸೇವೆ ಮಾಡುತ್ತೇನೆ ಎಂದರು.

ಪ್ರಚಾರಕ್ಕಾಗಿ ರಾಹುಲ್​ ಗಾಂಧಿ, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಬರಲಿದ್ದಾರೆ. 2018ರಲ್ಲಿ ಈ ಕ್ಷೇತ್ರಕ್ಕೆ ನರೇಂದ್ರ ಮೋದಿ ಬಂದಿದ್ದರು. ಅವರು ಬಂದು ಹೋದ ಮೇಲೆ ಮತ್ತೆ ಎರಡು ಕ್ಷೇತ್ರದಲ್ಲಿ ಹೆಚ್ಚಿನ ಸೀಟುಗಳು ಕಾಂಗ್ರೆಸ್​​ಗೆ ಬಂದಿವೆ. ಚಿಕ್ಕೋಡಿ ಕ್ಷೇತ್ರದಲ್ಲಿ ಅವರ ಹವಾ ಇಲ್ಲ. ಮತ್ತೆ ಗೆಲುವು ನಮ್ಮದೇ ಎಂದು ಹೇಳಿದರು.

ABOUT THE AUTHOR

...view details