ಕರ್ನಾಟಕ

karnataka

By

Published : Jan 15, 2021, 5:05 PM IST

Updated : Jan 15, 2021, 5:12 PM IST

ETV Bharat / state

ನಾನು ಮುಂಬೈಗೆ ಹೋಗಿರಲಿಲ್ಲ, ಆ ಗುಂಪಿನಲ್ಲೂ ನಾನಿಲ್ಲ : ಶ್ರೀಮಂತ್​​ ಪಾಟೀಲ್​​

ನಾನು ಮುಂಬೈಗೆ ಹೋಗಿರಲಿಲ್ಲ, ಆ ಗುಂಪಿನಲ್ಲೂ ನಾನಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂತ ನನಗೇನೂ ಸೂಚನೆ ಬಂದಿಲ್ಲ, ನನ್ನ ಬಳಿ ರಾಜೀನಾಮೆ ಕೇಳಲು ಕಾರಣವೂ ಇಲ್ಲ. ನನ್ನ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇದ್ದು, ಎಲ್ಲರೂ ಖುಷ್ ಇದ್ದಾರೆ. ನಾನು ಇಲಾಖೆಯ ಬಹಳಷ್ಟು ಕೆಲಸ ಮಾಡಿದ್ದೇನೆ ಎಂದು ಜವಳಿ ಸಚಿವ ಶ್ರೀಮಂತ್​ ಪಾಟೀಲ್​​ ಹೇಳಿದ್ದಾರೆ.

Textile Minister Shrimant Patil
ಜವಳಿ ಸಚಿವ ಶ್ರೀಮಂತ್​ ಪಾಟೀಲ್​​

ಬೆಳಗಾವಿ: ನಾನು ಮುಂಬೈಗೆ ಹೋಗಿರಲಿಲ್ಲ, ಆ ಗುಂಪಿನಲ್ಲೂ ನಾನಿಲ್ಲ ಎಂದು ಜವಳಿ ಸಚಿವ ಶ್ರೀಮಂತ್​ ಪಾಟೀಲ್​​ ಹೇಳಿದ್ದಾರೆ.

ಜವಳಿ ಸಚಿವ ಶ್ರೀಮಂತ್​ ಪಾಟೀಲ್​

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂತ ನನಗೇನೂ ಸೂಚನೆ ಬಂದಿಲ್ಲ. ನನ್ನ ಬಳಿ ರಾಜೀನಾಮೆ ಕೇಳಲು ಕಾರಣವೂ ಇಲ್ಲ. ನನ್ನ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇದ್ದು, ಎಲ್ಲರೂ ಖುಷ್ ಇದ್ದಾರೆ. ನಾನು ಇಲಾಖೆಯ ಬಹಳಷ್ಟು ಕೆಲಸ ಮಾಡಿದ್ದೇನೆ. ನಾನು ಬೇರೆ ಕಲ್ಚರ್‌ನಿಂದ ಬಂದವನಾಗಿದ್ದೇನೆ ಎಂದರು.

ಓದಿ:ಸಿಡಿ ಇದ್ದವರು ಬಿಡುಗಡೆ ಮಾಡಲಿ: ಸತೀಶ್​​ ಜಾರಕಿಹೊಳಿ‌

ಸಿಎಂ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿಎಂ ಸೂಚನೆ ನೀಡಿಲ್ಲ. ಆದರೆ ಮುಖ್ಯಮಂತ್ರಿ, ಪಕ್ಷದ ಹೈಕಮಾಂಡ್ ಏನೇ ಹೇಳಿದ್ರು ನಾವು ಪಾಲಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೆ. ನಾನು ಕೇಳದೆ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಒಂದು ವೇಳೆ ಸಿಎಂ ರಾಜೀನಾಮೆ ಕೊಡು ಅಂದ್ರೆ ಕೊಡಲೇಬೇಕಾಗುತ್ತದೆ. ಉಳಿದವರಿಗೆ ಮಂತ್ರಿಸ್ಥಾನ ನೀಡದಿದ್ದಕ್ಕೆ ಏನಾದರೂ ಸಮಸ್ಯೆ ಇರಬಹುದು‌. ಸಿಡಿ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಅಷ್ಟೊಂದು ಡೀಪ್ ಆಗಿ ನಾನು ಹೋಗಿಲ್ಲ ಎಂದರು.

Last Updated : Jan 15, 2021, 5:12 PM IST

ABOUT THE AUTHOR

...view details