ಕರ್ನಾಟಕ

karnataka

By

Published : Sep 23, 2019, 9:18 AM IST

ETV Bharat / state

ಗೋಕಾಕ್​ ಅಖಾಡದಲ್ಲಿ ಸಹೋದರರ ದಂಗಲ್​: ಕಾಂಗ್ರೆಸ್ ‌ಅಭ್ಯರ್ಥಿ ನಾನೇ ಎಂದ ಲಖನ್ ಜಾರಕಿಹೊಳಿ

ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ದಿನಾಂಕವನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಲಖನ್ ಜಾರಕಿಹೊಳಿ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ನಾನೇ ಕಾಂಗ್ರೆಸ್​ ಅಭ್ಯರ್ಥಿ. ನನ್ನ ಎದುರಾಳಿ ಯಾರೇ ಆಗಿದ್ದರೂ ಭಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

Lakhan Jarkiholi, ಲಖನ್ ಜಾರಕಿಹೊಳಿ

ಬೆಳಗಾವಿ:25 ವರ್ಷಗಳಿಂದಲೂ ಕಾಂಗ್ರೆಸ್​ನಲ್ಲಿದ್ದೇನೆ. ಎದುರಾಳಿ ಯಾರೇ ಆಗಿರಲಿ, ಗೋಕಾಕ್​ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ‌ತಾನೇ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಉಪಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪ್ರಚಾರದ ಅಖಾಡಕ್ಕೆ ಧುಮಕಿರುವ ಲಖನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಪ್ರಚಾರ ಆರಂಭಿಸಿದ್ದೇ‌ನೆ. ಎದುರಾಳಿ ಯಾರು ಆಗ್ತಾರೋ ಗೊತ್ತಿಲ್ಲ. ಆದರೆ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೇ. ಗೋಕಾಕ್ ಮತದಾರರ ನಾಡಿಮಿಡಿತ ನನಗೆ ಗೊತ್ತು. ನಮ್ಮ ಭಾಗದ ಜನರಿಗೆ ಬಹಳ ಅನ್ಯಾಯ ಆಗಿದ್ದು, ಅದನ್ನ ಸರಿಪಡಿಸಬೇಕಿದೆ ಎಂದರು.

ಕಾಂಗ್ರೆಸ್​​ ಮುಖಂಡ ಲಖನ್ ಜಾರಕಿಹೊಳಿ

ಉಪಚುನಾವಣೆ ಐಎಎಸ್‌ ಪರೀಕ್ಷೆ ಇದ್ದ ಹಾಗೆ. ಅದಕ್ಕೆ‌ ತಯಾರಿಯನ್ನೂ ಆರಂಭಿಸಿದ್ದೇನೆ. ರಮೇಶ್ ಅವರ ರಾಜಕೀಯ ತಂತ್ರಗಾರಿಕೆ ನನಗೆ ಗೊತ್ತು. ಅದಕ್ಕೆ ತಡವಾಗಿ ಕಣಕ್ಕಿಳಿದಿದ್ದೇನೆ. ರಮೇಶ್ ಜಾರಕಿಹೊಳಿ ಮೂರು ಜನ ಅಳಿಯರ ಮಾತು ಕೇಳಿ ಬಿಜೆಪಿ ಸೇರಿದ್ದಾರೆ. ನಮ್ಮ ತಂದೆಯಿಂದಲೂ ಜಾರಕಿಹೊಳಿ ಕುಟುಂಬ ಕಾಂಗ್ರೆಸ್​ನಲ್ಲಿದೆ. ಗೋಕಾಕ್​ನಲ್ಲಿ ರಮೇಶ್ ಜಾರಕಿಹೊಳಿ ಅಳಿಯಂದರ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ನಾನು ಕಾಂಗ್ರೆಸ್​ನಿಂದ ಸ್ಪರ್ಧಿಸುತ್ತಿರುವೆ. ಈಗ ಟಾಸ್ ಆಗಿದೆ. ನಾನು ಬ್ಯಾಟಿಂಗ್ ಆಯ್ದುಕೊಂಡಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ರು.

ಸತೀಶ್ ಲಖನ್ ತಲೆ ಕೆಡಸುತ್ತಿದ್ದಾನೆ ಎಂದು ರಮೇಶ್ ಆರೋಪಕ್ಕೆ‌ ಪ್ರತಿಕ್ರಿಯಿಸಿದ ಅವರು, ಲಖನ್ ಯಾರು, ಯಾರ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂಬುದು ಈಗ ಮಾತನಾಡುವುದು ಬೇಡ. ಮೂವರು ಅಳಿಯಂದರು ರಮೇಶ್​ ತಲೆ‌‌ಕೆಡಿಸುತ್ತಿದ್ದಾರೆ‌. ಅಳಿಯಂದಿರ ಮಾತು ಕೇಳಿ ರಮೇಶ್ ಬಿಜೆಪಿಗೆ ಹೋಗಿದ್ದಾರೆ. ಚುನಾವಣೆ ಮಾಡುವವರೊಬ್ಬರು, ದುಡಿಯುವವರೊಬ್ಬರು, ಮೆರೆಯುವವರೊಬ್ಬರು ಎಂಬ ಸ್ಥಿತಿ‌ ನಿರ್ಮಾಣವಾಗಿದೆ ಎಂದು‌ ಸಹೋದರ ರಮೇಶ್​ಗೆ ಲಖನ್‌ ಟಾಂಗ್ ಕೊಟ್ಟರು.

ಬ್ಲ್ಯಾಕ್‌ ಮೇಲ್ ಮತ್ತು ಗೂಂಡಾಗಿರಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ನಮ್ಮ ಕ್ಷೇತ್ರದ ಜನರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅವರ ಬದುಕು ರೂಪಿಸುವ ಸಲುವಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಲಖನ್​ ಹೇಳಿದ್ರು.

ABOUT THE AUTHOR

...view details