ಕರ್ನಾಟಕ

karnataka

ಮಳೆಯ ಆರ್ಭಟಕ್ಕೆ ಧರೆಗುರುಳಿದ ಮನೆಗಳು, ಕುಸಿಯುತ್ತಿದೆ ಗುಡ್ಡ!

By

Published : Aug 7, 2019, 1:27 PM IST

ಬೆಳಗಾವಿಯಲ್ಲಿ ನಿಲ್ಲದ ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳುತ್ತಿವೆ. ನಗರದ ಕೆಲವು ಪ್ರದೇಶಗಳು ಈಗಾಗಲೇ ನೀರಿನಲ್ಲಿ ಮುಳುಗಿದ್ದು, ಸಿಲುಕಿ ಹಾಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದೆ.

ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳಿರುವುದು

ಬೆಳಗಾವಿ:ಮಹಾಮಳೆ ಮುಂದುವರೆದಿದ್ದು, ಕರ್ನಾಟಕ‌, ಗೋವಾ ಗಡಿಯಲ್ಲಿ ಭಾರಿ‌ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿದೆ. ಕಳೆದ ಒಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ವರುಣನ ಆರ್ಭಟಕ್ಕೆ ಮನೆಗಳು ಧರೆಗುರುಳಿರುವುದು

ಚೋರ್ಲಾ ಘಾಟ್​​ನಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಗೋವಾ, ಬೆಳಗಾವಿ ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ವಾಹನ ಸವಾರರು ರಸ್ತೆ ಮಧ್ಯೆ ಸಿಲುಕಿದ್ದಾರೆ.

ಜಲಾವೃತವಾಗುತ್ತಿವೆ ನಗರಗಳು:ಒಂದೇ ದಿನಕ್ಕೆ 25 ಮನೆಗಳು ಜಲಾವೃತವಾಗಿವೆ. ಬೆಳಗಾವಿಯಲ್ಲಿ ಮುಂದುವರೆದ ಮಳೆಗೆ ನಗರದ ಅನೇಕ ಸ್ಥಳಗಳು ನೀರಲ್ಲಿ ಮುಳುಗುತ್ತಿವೆ. ಇಲ್ಲಿನ ಓಂನಗರ, ಸಮರ್ಥನಗರ, ಟೀಳಕವಾಡಿ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮನೆಗಳು ಕುಸಿದಿವೆ.

ABOUT THE AUTHOR

...view details