ಬೆಳಗಾವಿ:ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಮಹಾ ಮಳೆಗೆ ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ ಜನರು ರಸ್ತೆಯ ಮೇಲೆಯೇ ಹಾಲುನ್ನು ಸುರಿದಿರುವ ಘಟನೆ ಗಂದಿಗವಾಡ ಗ್ರಾಮದಲ್ಲಿ ನಡೆದಿದೆ.
ಮಹಾಮಳೆಗೆ ನಲುಗಿದ ಬೆಳಗಾವಿ: ವಾಹನ ಸಂಚಾರವಿಲ್ಲದೆ ಹಾಲು ಬೀದಿಪಾಲು! - ರಸ್ತೆ ಸಂಚಾರ
ಕೆಲ ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಹಾಮಳೆಗೆ ಬೆಳಗಾವಿ ಜಿಲ್ಲೆ ಅಕ್ಷಶಃ ನದಿಯಂತಾಗಿದೆ. ಹಲವೆಡೆ ರಸ್ತೆ ಸಂಚಾರ ಸ್ಥಗಿಗೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಮಹಾಮಳೆಗೆ ನಲುಗಿದ ಬೆಳಗಾವಿ: ಹಲವೆಡೆ ಸಂಚಾರ ಸ್ಥಗಿತ
ಮಹಾಮಳೆಗೆ ನಲುಗಿದ ಬೆಳಗಾವಿ: ಸಂಚಾರ ಸ್ಥಗಿತದಿಂದ ಹಾಲು ರಸ್ತೆಪಾಲು
ಹೌದು, ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ನಾಲ್ಕೈದು ದಿನಗಳಿಂದ ಗ್ರಾಮದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆ ಜನರು ಹಾಲನ್ನು ಬೇರೆಡೆಗೆ ಸಾಗಿಸಲು ಸಹ ಸಾಧ್ಯವಾಗದೆ ಬೇಸರದಿಂದ ರಸ್ತೆಯ ಮೇಲೆಯೇ ಹಾಲನ್ನ ಚೆಲ್ಲಿದ್ದಾರೆ.