ಕರ್ನಾಟಕ

karnataka

ETV Bharat / state

ಪ್ರತಿನಿತ್ಯ ಮಂಗಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆಯುತ್ತಿರುವ ಕಲಾವಿದ... - Lockdown effect

ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಹನುಮಂತ ದೊಡ್ಡಕ್ಕನ್ನವರ, ಪ್ರತಿ ದಿನ ಗ್ರಾಮದಲ್ಲಿರುವ ಮಂಗಗಳಿಗೆ ಆಹಾರ ಮತ್ತು ನೀರು ನೀಡುತ್ತಿದ್ದಾರೆ.

ChiKkodi
ಆಹಾರ ನೀಡುತ್ತಿರುವ ಹನುಮಂತ

By

Published : Apr 20, 2020, 5:01 PM IST

ಚಿಕ್ಕೋಡಿ (ಬೆಳಗಾವಿ) : ಲಾಕ್‌ಡೌನ್‌ ಪರಿಣಾಮ ಸಾರ್ವಜನಿಕರ ಮೇಲೆ ಅಷ್ಟೇ ಅಲ್ಲದೆ ಪ್ರಾಣಿಗಳಿಗೂ ತಟ್ಟಿದೆ. ಮಂಗಗಳಿಗೆ ಪ್ರತಿ ನಿತ್ಯದ ಆಹಾರ ಸಿಗದೆ ಪರದಾಡುತ್ತಿದ್ದು, ಅವುಗಳಿಗೆ ವ್ಯಕ್ತಿಯೊಬ್ಬರು ಪ್ರತಿದಿನ ಆಹಾರ, ನೀರು‌ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಮಂಗಗಳಿಗೆ ಪ್ರತಿನಿತ್ಯ ಆಹಾರ ನೀಡಿ ಮಾನವೀಯತೆ ಮೆರೆದ ಚಿತ್ರ ಕಲಾವಿದ ಹನುಮಂತ
ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಚಿತ್ರ ಕಲಾವಿದ ಹನುಮಂತ ದೊಡ್ಡಕ್ಕನ್ನವರ ಪ್ರತಿದಿನ ಗ್ರಾಮದಲ್ಲಿರುವ ಮಂಗಗಳಿಗೆ ಆಹಾರ ಮತ್ತು ನೀರು ನೀಡುತ್ತಿದ್ದಾರೆ. ಮಂಗಗಳು ಕೂಡ ಹಸಿವಾದಾಗ ಆಹಾರಕ್ಕಾಗಿ ಹನುಮಂತ ಅವರನ್ನು‌ ಹುಡುಕಿಕೊಂಡು ಬರುತ್ತವೆ. ನೀಡುವ ಆಹಾರವನ್ನು ಅವರ ಜೊತೆಗೆ ಕುಳಿತು ತಿಂದು ನಂತರ ಅಲ್ಲಿಂದ ಹೋಗುತ್ತವೆ.

ಹನುಮಂತ ಅವರ ಈ ಕೆಲಸಕ್ಕೆ ಗ್ರಾಮಸ್ಥರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಕೈಲಾದ ಆಹಾರ ನೀಡಿ ಸಹಾಯ ಮಾಡುತ್ತಿದ್ದಾರೆ.

ABOUT THE AUTHOR

...view details