ಕರ್ನಾಟಕ

karnataka

ನೀವು ಎಷ್ಟೇ ಟ್ವಿಸ್ಟ್​​ ಮಾಡಿ ಕೇಳಿದ್ರೂ ನಾನು ಪ್ರಶ್ನೆ ಪತ್ರಿಕೆ ಲೀಕ್​​ ಮಾಡಲ್ಲ: ಲಖನ್​​​ ಜಾರಕಿಹೊಳಿ

ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಪ್ರಚಾರ ಮುಂದುವರೆಸುತ್ತೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಲಖನ್​ ಜಾರಕಿಹೊಳಿ ತಿಳಿಸಿದರು.

By

Published : Nov 19, 2019, 4:39 PM IST

Published : Nov 19, 2019, 4:39 PM IST

ಗೋಕಾಕ​​​​​​​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ

ಗೋಕಾಕ: ಕಳೆದ 20 ವರ್ಷದಿಂದ ರಮೇಶ್ ಮಾತು ಕೇಳ್ತಿದ್ವಿ. ಆಗ ನಾವು ರಮೇಶ್​ಗೆ ಒಳ್ಳೆಯವರಾಗಿದ್ವಿ. ಆದರೆ, ಈಗ ಅವರ ಅಳಿಯಂದಿರ ಭ್ರಷ್ಟಾಚಾರ ಹೊರ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತದೆಯಾ ಎಂದು ಗೋಕಾಕ್​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ ಹೇಳಿದರು.

ಗೋಕಾಕ್​​​​​​​​​​​​​​​ ಕಾಂಗ್ರೆಸ್ ಅಭ್ಯರ್ಥಿ ಲಖನ್​ ಜಾರಕಿಹೊಳಿ

ಗೋಕಾಕ್​​ನ ಮಿನಿ ವಿಧಾನಸೌಧಕ್ಕೆ ನಾಮಪತ್ರ ಪರಿಶೀಲನೆ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮತಕ್ಷೇತ್ರದ ಜನರೇ ನಮಗೆ ದೇವರು ಇದ್ದ ಹಾಗೆ. ನಾವು ಎಲ್ಲರೂ ಕುಟುಂಬದ ತರಹ ಇದ್ದು, ಜನರಿಗೆ ಅನ್ಯಾಯ ಆದರೆ ನಾವು ಸುಮ್ಮನೆ ಕೂರಲ್ಲ. ಕಾಂಗ್ರೆಸ್​ಗೆ ಅಷ್ಟೇ ಅಲ್ಲ ನಮ್ಮ ಮತಕ್ಷೇತ್ರದ ಜನರಿಗೂ ರಮೇಶ್​ ಜಾರಕಿಗೊಳಿ ಚೂರಿ ಹಾಕಿದ್ದಾರೆ ಎಂದರು.

ನೀವು ಎಷ್ಟೆ ಟ್ವಿಸ್ಟ್ ಮಾಡಿ ಕೇಳಿದರೂ ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಕಳೆದ 20 ವರ್ಷದಿಂದ ನಾನು ರ‍್ಯಾಂಕ್​​​ ಸ್ಟೂಡೆಂಟ್. ನಾನು ಪ್ರಶ್ನೆ ಪತ್ರಿಕೆ ಲೀಕ್ ಮಾಡಲ್ಲ. ಸತೀಶ್ ಜಾರಕಿಹೊಳಿ ಮತ್ತು ನಮ್ಮ ಕಾಂಗ್ರೆಸ್ ನಾಯಕರ ಜೊತೆ ಪ್ರಚಾರ ನಡೆಸುತ್ತೇನೆ ಎಂದರು.

ABOUT THE AUTHOR

...view details