ಕರ್ನಾಟಕ

karnataka

ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ: ಗಡಿ ಬಂದ್ ಮಾಡುವಂತೆ ಗಜಾನನ ಮಂಗಸೂಳಿ ಆಗ್ರಹ

By

Published : Sep 12, 2020, 7:47 PM IST

ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳವಾಗಿರುವುದರಿಂದ ಗಡಿಭಾಗದ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಿ ಗಡಿ ಚೆಕ್​​​​ಪೋಸ್ಟ್​​ಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಬೇಕು, ಅಲ್ಲದೆ ಮಹಾರಾಷ್ಟ್ರದ ಜನರನ್ನು ಕರ್ನಾಟಕ ಗಡಿಯೊಳಗೆ ಬರದಂತೆ ನೋಡಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

Gajanana mangasuli appeal to government for close Belagavi border
ಮಹಾರಾಷ್ಟ್ರ ಕೊರೊನಾ: ಗಡಿ ಬಂದ್ ಮಾಡುವಂತೆ ಗಜಾನನ ಮಂಗಸೂಳಿ ಮನವಿ

ಅಥಣಿ (ಬೆಳಗಾವಿ): ಮಹಾರಾಷ್ಟ್ರ ಗಡಿ ಜಿಲ್ಲೆಯಾದ ಸಾಂಗ್ಲಿ ನಗರದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಅಥಣಿ ಗಡಿಭಾಗದ ರಸ್ತೆಗಳಲ್ಲಿ ಕರ್ನಾಟಕ ಸರ್ಕಾರ ಕಟ್ಟೆಚ್ಚರ ವಹಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆಗ್ರಹಿಸಿದ್ದಾರೆ.

ಗಡಿ ಬಂದ್ ಮಾಡುವಂತೆ ಗಜಾನನ ಮಂಗಸೂಳಿ ಮನವಿ

ಮಹಾರಾಷ್ಟ್ರದಲ್ಲಿ ಕೊರೊನಾ ವ್ಯಾಪಕವಾಗಿದ್ದು, ಸಾಂಗ್ಲಿ ಜಿಲ್ಲಾಡಳಿತ ನಗರದಲ್ಲಿ 10 ದಿನದವರೆಗೆ ಮತ್ತೆ ಲಾಕ್​​ಡೌನ್​​ ಆದೇಶ ಮಾಡಿದೆ. ಸಾಂಗ್ಲಿಯಿಂದ ಅಥಣಿ ಪಟ್ಟಣಕ್ಕೆ ದಿನನಿತ್ಯ ನೂರಾರು ಜನರು ಬಂದು ಪುನಃ ಮಹಾರಾಷ್ಟ್ರಕ್ಕೆ ಮರಳುತ್ತಾರೆ. ಈ ಹಿನ್ನೆಲೆಯಲ್ಲಿ ಗಡಿಭಾಗದ ಗ್ರಾಮದಲ್ಲಿ ಬೆಳಗಾವಿ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಿ ಗಡಿ ಚೆಕ್​​​​ಪೋಸ್ಟ್​​ಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಬೇಕು. ಅಲ್ಲದೆ ಮಹಾರಾಷ್ಟ್ರದ ಜನರನ್ನು ಕರ್ನಾಟಕ ಗಡಿಯೊಳಗೆ ಬರದಂತೆ ನೋಡಿಕೊಳ್ಳಿ ಎಂದು ಆಗ್ರಹ ಮಾಡಿದ್ದಾರೆ.

ಈ ಎರಡು ವಾರದಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಸಂದರ್ಭ ಬಿಟ್ಟು ಉಳಿದಂತೆ ಎಲ್ಲಾ ಗಡಿ ರಸ್ತೆಗಳನ್ನು ಬಂದ್ ಮಾಡಿ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details