ಕರ್ನಾಟಕ

karnataka

ETV Bharat / state

ಅರ್ಹರು ಎಂದು ವಾದಿಸುವ ಅನರ್ಹ ಶಾಸಕರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು: ರಮೇಶ್​ ಕುಮಾರ್​ - Former Speaker Ramesh Kumar Statement against Disqualified MLA's

ಸುಪ್ರೀಂ ಕೋರ್ಟ್ ಹೇಳಿದ ಮೇಲೂ ನಾವು ಅರ್ಹರು ಎಂದು ಹೇಳಿಕೊಳ್ಳುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ಇಲ್ಲಿ ಇಲ್ಲಾ ಅಂದ್ರೆ ಬೆಂಗಳೂರಿಗೆ ಕರೆದೊಯ್ಯಿರಿ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

Ramesh Kumar Statement against Disqualified MLA's in Athani
ಮಾಜಿ ಸ್ಪೀಕರ್​ ರಮೇಶ್​ ಕುಮಾರ್

By

Published : Nov 27, 2019, 6:19 PM IST

ಅಥಣಿ:ಸುಪ್ರಿಂ ಕೋರ್ಟ್​ ಅನರ್ಹರು ಎಂದು ಹೇಳಿದ ಮೇಲೂ ತಾವು ಅರ್ಹರು ಎಂದು ವಾದಿಸುತ್ತಿರುವ ಅನರ್ಹ ಶಾಸಕರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸ್ಪೀಕರ್​ ರಮೇಶ್​ ಕುಮಾರ್

ಇಂದು ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ನೀವು, ನಾನು ಹೇಗೆ ನಡೆದುಕೊಳ್ಳಬೇಕು ಅನ್ನುವುದಕ್ಕೆ ಒಂದು ಸಂವಿಧಾನ ಇದೆ. ಒಂದು ಆಸ್ತಿ ವಿವಾದ ಆದ್ರೆ ಕೋರ್ಟಿಗೆ ಹೋಗ್ತೀರ. ಇಲ್ಲ ಮಚ್ಚು ಹಿಡಿದುಕೊಂಡು ತೆಗೆದುಕೊಂಡು ಹೋಗ್ತೀರ ಹೇಳಿ. ಶಿವರಾತ್ರಿ ಬಂದ್ರೆ ಹಿಂದೂಗಳು ಪೂಜೆ ಮಾಡ್ತಾರೆ. ರಂಜಾನ್​ ಬಂದ್ರೆ ಇಸ್ಲಾಂ ಧರ್ಮದವರು ಉಪವಾಸ ಇರುತ್ತಾರೆ. ಎಲ್ಲವೂ ಅವರವರ ವೈಯುಕ್ತಿಕ ವಿಷಯಗಳು, ಆದ್ರೆ ರಾಷ್ಟ್ರಗೀತೆ ಕೇಳುವಾಗ ಎಲ್ಲರೂ ಎದ್ದು ನಿಲ್ಲಬೇಕು ಅನ್ನೋದು ಸಂವಿಧಾನ. ಈ ದೇಶಕ್ಕೆ ಒಂದು ಚೌಕಟ್ಟು ಇದೆ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಹೇಳಿದ ಮೇಲೂ ನಾವು ಅರ್ಹರು ಎಂದು ಹೇಳಿಕೊಳ್ಳುವವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು. ಇಲ್ಲಿ ಆ ಆಸ್ಪತ್ರೆ ಇಲ್ಲಾ ಅಂದ್ರೆ ಬೆಂಗಳೂರಿಗೆ ಕರೆದೊಯ್ಯಬೇಕು ಎಂದು ರಮೇಶ್​ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.

For All Latest Updates

TAGGED:

ABOUT THE AUTHOR

...view details