ಚಿಕ್ಕೋಡಿ :ಎರಡು ದಿನಗಳ ಕಾಲ ಜರುಗುವ ಬಸವ ಸಂಸ್ಕೃತಿ ಹಬ್ಬದ ನಿಮಿತ್ತ ಬಸವ ಮೂರ್ತಿಯ ಮೆರವಣಿಗೆಗೆ ಮಾಜಿ ಸಂಸದ ರಮೇಶ್ ಕತ್ತಿ ಚಾಲನೆ ನೀಡಿದರು.
ಬಸವ ಸಂಸ್ಕೃತಿ ಹಬ್ಬ: ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಾಜಿ ಸಂಸದ ರಮೇಶ್ ಕತ್ತಿ - ಚಿಕ್ಕೋಡಿಯಲ್ಲಿ ಬಸವ ಸಂಸ್ಕೃತಿ ಹಬ್ಬ ಸಂಭ್ರಮ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆಯುವ ಬಸವ ಸಂಸ್ಕೃತಿಯಂದು ಹೊಸದಾಗಿ ಬಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
![ಬಸವ ಸಂಸ್ಕೃತಿ ಹಬ್ಬ: ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಾಜಿ ಸಂಸದ ರಮೇಶ್ ಕತ್ತಿ ಬಸವ ಮೂರ್ತಿಯ ಮೆರವಣಿಗೆಗೆ ಮಾಜಿ ಸಂಸದ ರಮೇಶ್ ಕತ್ತಿ ಚಾಲನೆ](https://etvbharatimages.akamaized.net/etvbharat/prod-images/768-512-6160108-thumbnail-3x2-papa.jpg)
Former MP Ramesh inaugurated Basava Statue at Chikodi
ಬಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಸಂಸದ ರಮೇಶ್ ಕತ್ತಿ
ಬೆಳಗಾವಿಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮಾತನಾಡಿದ ಅವರು, ಒಂದು ದಿನದ ಮಟ್ಟಿಗೆ ಬಸವಣ್ಣನವರ ಕುರಿತು ಜೈಕಾರ ಹಾಕಿದರೆ ಸಾಲದು. ಬದುಕಿನುದ್ದಕ್ಕೂ ಸಂಸ್ಕಾರವಂತರಾಗಿ ಬಾಳಬೇಕಾದರೆ ನಿತ್ಯ ವಿಭೂತಿ ಹಚ್ಚಿಕೊಂಡು ಗುರು- ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದದರು.
ಚಾಲನೆ ನೀಡಿದ ಬಳಿಕ ಮೆರವಣಿಗೆಯಲ್ಲಿ ಭಾಗಿಯಾಗುವುದರ ಜೊತೆಗೆ ವಾದ್ಯ ಮೇಳದವರೊಂದಿಗೆ ರಮೇಶ್ ಕತ್ತಿ ಅವರು ಹೆಜ್ಜೆ ಹಾಕಿದರು.