ಕರ್ನಾಟಕ

karnataka

By

Published : Dec 1, 2019, 8:42 PM IST

ETV Bharat / state

ಪಕ್ಷೇತರ ಅಭ್ಯರ್ಥಿ ಮನವೊಲಿಸಲು ಯತ್ನಿಸಿದ ಮಾಜಿ ಸಚಿವ ಎಂ.ಬಿ.ಪಾಟೀಲ್

ಇಂದು ಅಥಣಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಇಮ್ರಾನ್ ಪಟೇಲ್ ಮನೆಗೆ ಮಾಜಿ ಸಚಿವ ಎಂ.ಬಿ ಪಾಟೀಲ ತೆರಳಿ ಅವರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ.

Former minister MBP has try to convince non-party candidate
ಪಕ್ಷೇತರ ಅಭ್ಯರ್ಥಿ ಮನವೊಲಿಸಲು ಯತ್ನಿಸಿದ ಮಾಜಿ ಸಚಿವ ಎಂ.ಬಿ.ಪಿ

ಅಥಣಿ :ಉಪ ಚುನಾವಣೆ ಕದನದಲ್ಲಿ ರಾಜಕೀಯ ಹೊಂದಾಣಿಕೆಗೆ ಮುಂದಾದ ಮಾಜಿ ಸಚಿವ ಎಂ.ಬಿ ಪಾಟೀಲ, ಇಂದು ಅಥಣಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಇಮ್ರಾನ್ ಪಟೇಲ್ ಮನೆಗೆ ತೆರಳಿ ಅವರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಮನವೊಲಿಸಲು ಯತ್ನಿಸಿದ ಮಾಜಿ ಸಚಿವ ಎಂ.ಬಿ.ಪಿ

ಅಥಣಿ ಮತ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಇಮ್ರಾನ್ ಪಟೇಲ್ ಭರ್ಜರಿ ಪ್ರಚಾರ ಕಂಡು ಮತಗಳು ಒಡೆಯುವ ಸಾಧ್ಯತೆ ಅರಿತ ಎಂ.ಬಿ ಪಾಟೀಲ, ಇಮ್ರಾನ್ ಪಟೇಲ್ ಅವರ ಮನೆಗೆ ಭೇಟಿ ನೀಡಿದ್ದು ದಯವಿಟ್ಟು ನಮ್ಮ ಓಟುಗಳನ್ನ ಹಾಳು ಮಾಡಬೇಡಿ ಎಂದು ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಎಂದು ಕೂಡ ಹೇಳುವ ಮೂಲಕ ಗಜಾನನ ಮಂಗಸೂಳಿ ಅವರ ಮತ ಹೆಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನೂ ಪಕ್ಷೇತರ ಅಭ್ಯರ್ಥಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಒಳ್ಳೆಯ ಸ್ಥಾನವನ್ನು ಕೊಡುವುದಾಗಿ ಎಂ.ಬಿ. ಪಾಟೀಲ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಮನವೊಲಿಕೆ ಯತ್ನ ವೇಳೆ ಬಂದ ಮಾಧ್ಯಮದವರನ್ನು ನೋಡಿದ ಎಂ.ಬಿ.ಪಾಟೀಲ್, ಮಾಧ್ಯಮದವರನ್ನು ನೀನೆ ಬರಲು ಹೇಳಿದ್ದಿಯಾ ಅಂತ ಪಕ್ಷೇತರ ಅಭ್ಯರ್ಥಿಯನ್ನು ಎಂ.ಬಿ ಪಾಟೀಲ ಕೇಳಿದ್ದು, ಅಲ್ಲದೇ ಮಾಧ್ಯಮದವರು ದೃಶ್ಯ ಚಿತ್ರೀಕರಿಸದಂತೆ ಅವರ ಬೆಂಬಲಿಗರು ತಡೆದಿದ್ದಾರೆ.

ABOUT THE AUTHOR

...view details