ಕರ್ನಾಟಕ

karnataka

ETV Bharat / state

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು! - chikkodi boys eat grave of crows

ಮೂಢನಂಬಿಕೆ ವಿರುದ್ಧ ಸಮರ ಸಾರಿದ ಜಿಲ್ಲೆಯ ರಾಯಭಾಗದ ಕೆಲ ಯುವಕರು, ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

chikkodi boys eat grave of crows
ಕಾಗೆಗಿಟ್ಟ ಪಿಂಡವನ್ನು ತಿಂದ ಚಿಕ್ಕೋಡಿ ಯುವಕರು

By

Published : Dec 14, 2019, 1:25 PM IST

ಚಿಕ್ಕೋಡಿ: ಯಾರಾದರೂ ತೀರಿಕೊಂಡರೆ ವಾಡಿಕೆಯಂತೆ ಮೂರು ದಿನದ ನಂತರ ಕಾಗೆಗಳಿಗೆ ಆಹಾರವನ್ನು ಇಡಲಾಗುತ್ತೆ. ಇಟ್ಟ ಆಹಾರವನ್ನು ಕಾಗೆ ಬಂದು ತಿಂದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾದಂತೆ ಎಂಬ ನಂಬಿಕೆ ಇದೆ.

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು

ಆದರೆ ಇದು ಮೂಢನಂಬಿಕೆ. ಇದನ್ನು ಹೋಗಲಾಡಿಸಬೇಕು ಎಂದು ಬಯಸಿದ ಕೆಲ ಯುವಕರು ಕಾಗೆಗಿಟ್ಟ ಆಹಾರವನ್ನು ತಾವೇ ತಿಂದಿದ್ದಾರೆ. ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ.

ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸೇವಂತಿ ಕರುಣೆ ಎಂಬ ಮಹಿಳೆ ತೀರಿಕೊಂಡಿದ್ದರು. ಅವರ ಸಮಾಧಿ ಮೇಲೆ ಕಾಗೆಗೆಂದು ಮಹಿಳೆಯ ಸಂಬಂಧಿಕರು ಆಹಾರವಿಟ್ಟಿದ್ದರು. ಆದರೆ ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಸಹ ಕಾಗೆ ಬರದೆ ಇರುವುದನ್ನು ಗಮನಿಸಿದ ಯುವಕರು, ತಾವೇ ಮುಂದಾಗಿ ಆಹಾರ ಸೇವಿಸಿದ್ದಾರೆ.ದಲಿತ ಸಂಘರ್ಷ ಸಮಿತಿ ಭೀಮವಾದ ಯುವ ಸೇನೆಗೆ ಸೇರಿದ ಯುವಕರು ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

ABOUT THE AUTHOR

...view details