ಕರ್ನಾಟಕ

karnataka

By

Published : Feb 26, 2020, 4:17 PM IST

ETV Bharat / state

ಗ್ರಾಮ ಪಂಚಾಯತ್​ ಬಂದ್ ಮಾಡಿ ನೆರೆ ಸಂತ್ರಸ್ತರ ಹೋರಾಟ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮ ಪಂಚಾಯತ್​ ಬಂದ್​ ಮಾಡಿ, ಪ್ರವಾಹ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳನ್ನು ಅನರ್ಹರು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ಅರ್ಹರಿಗೆ ಕೊಡಿಸಿ ಎಂದು ಪ್ರವಾಹ ಸಂತ್ರಸ್ತರು ಪ್ರತಿಭಟನೆ ನಡೆಸಿದ್ರು.

closing Gram Panchayath
ನೆರೆ ಸಂತ್ರಸ್ಥರ ಹೋರಾಟ

ಚಿಕ್ಕೋಡಿ: ಪ್ರವಾಹ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳನ್ನು ಅನರ್ಹರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಭಿರಡಿ ಗ್ರಾಮ ಪಂಚಾಯತ್​ ಬಂದ್​ ಮಾಡಿ ಸಂತ್ರಸರು ಪ್ರತಿಭಟನೆ ನಡೆಸಿದ್ರು.

ನೆರೆ ಸಂತ್ರಸ್ತರ ಹೋರಾಟ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭಿರಡಿ ಗ್ರಾಮ ಪಂಚಾಯತ್​ ಎದುರು ಸಂತ್ರಸ್ತರು ಧರಣಿ ನಡೆಸಿದ್ರು. 2005 ರಲ್ಲಿ ಪ್ರವಾಹ ಸಂತ್ರಸ್ತರಿಗೆ 134 ಮನೆಗಳನ್ನು ನಿರ್ಮಿಸಲಾಗಿತ್ತು. ಈ ಮನೆಗಳಲ್ಲಿ ಅನರ್ಹರು ವಾಸಮಾಡುತ್ತಿದ್ದು, ಅರ್ಹ ಪ್ರವಾಹ ಸಂತ್ರಸ್ತರಿಗೆ ಮನೆಗಳನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು.

ಈ ಸಂಬಂಧ ಹಲವು ಬಾರಿ ರಾಯಬಾಗ ತಹಶಿಲ್ದಾರ್​​, ಚಿಕ್ಕೋಡಿ ಎಸಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ರು.

ABOUT THE AUTHOR

...view details