ಕರ್ನಾಟಕ

karnataka

ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸ್​​​​ ಸಿಬ್ಬಂದಿಗೆ ಸನ್ಮಾನ

By

Published : May 20, 2020, 1:17 PM IST

ಲಾಕ್​ಡೌನ್​ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಶ್ರಮಿಸುತ್ತಿರುವ ಪೊಲೀಸರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದು ಹೋರಾಟಗಾರ ಮಹಾವೀರ ಮೋಹಿತೆ ಹೇಳಿದರು.

Felicitation Ceremony to cops  by publics at chikkodi
ಪೊಲೀಸ್​ ಸಿಬ್ಬಂದಿಗೆ ಗೌರವಯುತವಾಗಿ ಸನ್ಮಾನಿಸಿದ ಚಿಕ್ಕೋಡಿ ಜನತೆ

ಚಿಕ್ಕೋಡಿ:ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೇ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ದುಡಿಯುತ್ತಿರುವ ತಾಲೂಕಿನ ಪೊಲೀಸ್​ ಸಿಬ್ಬಂದಿಗೆ ಇಲ್ಲಿನ ಜನ ಸನ್ಮಾನ ಮಾಡಿ ಗೌರವಿಸಿದರು.

ತಾಲೂಕಿನ ಪೊಲೀಸ್​ ಠಾಣೆಯ ಸಿಪಿಐ ಆರ್.ಆರ್.ಪಾಟೀಲ, ಪಿಎಸ್‍ಐ ರಾಕೇಶ ಬಗಲಿ ಹಾಗೂ ಠಾಣೆಯ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಲಾಕ್​ಡೌನ್​ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಶ್ರಮಿಸುತ್ತಿರುವ ಪೊಲೀಸರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದು ಹೋರಾಟಗಾರ ಮಹಾವೀರ ಮೋಹಿತೆ ಹೇಳಿದರು.

ಪೊಲೀಸ್​ ಸಿಬ್ಬಂದಿಗೆ ಸನ್ಮಾನ
ಈಗಾಗಲೇ ಕಳೆದ ಎರಡು ತಿಂಗಳಿನಿಂದ ದುಡಿಯುತ್ತಿರುವ ಪೊಲೀಸರು ತಮ್ಮ ತಮ್ಮ ಕುಟುಂಬದವರ ಜೊತೆ ಸೇರದೆ ಮನೆಯ ಹೊರಗಿನ ಕೋಣೆಯಲ್ಲಿ ವಾಸವಿದ್ದು, ಮತ್ತೆ ತಮ್ಮ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ತಮ್ಮ ಮಕ್ಕಳಿಗೆ, ಕುಟುಂಬದವರಿಗೆ ನಮ್ಮಿಂದ ಸೋಂಕು ಹರಡಬಾರದೆಂದು ಮುಂಜಾಗ್ರತಾ ಕ್ರಮವಾಗಿ ದೂರವಿಟ್ಟು ನಮ್ಮ ಸಲುವಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.

ABOUT THE AUTHOR

...view details