ಕರ್ನಾಟಕ

karnataka

ETV Bharat / state

ಕಾರ್ನಾಡ್​​​​ ವಿಧಿವಶ ಹಿನ್ನೆಲೆ ಸಚಿವ ಜಾರಕಿಹೊಳಿ-ಭೂ ಸಂತ್ರಸ್ತರ ಸಭೆ ರದ್ದು

ಭೂಮಿ ಕಳೆದುಕೊಂಡ ಸಂತ್ರಸ್ತರ ಜತೆಗೆ ಸಭೆ ನಡೆಸಲು ಸಚಿವರು‌ ನಿರ್ಧರಿಸಿದ್ದರು. ಆದರೆ ಗಿರೀಶ್​​ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಸಭೆ ರದ್ದುಗೊಳಿಸಲಾಗಿದೆ.

By

Published : Jun 10, 2019, 4:13 PM IST

ಸಚಿವ ಜಾರಕಿಹೊಳಿ-ಭೂ ಸಂತ್ರಸ್ತರ ಸಭೆ ರದ್ದು

ಬೆಳಗಾವಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾದ ಹಿನ್ನೆಲೆ ಸಚಿವ ಸತೀಶ್​​ ಜಾರಕಿಹೊಳಿ‌ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆ ರದ್ದುಗೊಳಿಸಲಾಗಿದೆ.

ಸಚಿವ ಜಾರಕಿಹೊಳಿ-ಭೂ ಸಂತ್ರಸ್ತರ ಸಭೆ ರದ್ದು

ಎಸ್ಟಿಪಿ ಘಟಕ ನಿರ್ಮಾಣಕ್ಕೆ ಫಲವತ್ತಾದ ಭೂಮಿ‌ ವಶಪಡಿಸಿಕೊಳ್ಳಲಾಗಿದೆ. ತಕ್ಷಣವೇ ಘಟಕ ಬೇರೆಡೆ ಸ್ಥಳಾಂತರಿಸಿ, ಭೂಮಿ ಮರಳಿಸುವಂತೆ ರೈತರು ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ‌ ಇದ್ದರು. ಭೂಮಿ ಕಳೆದುಕೊಂಡ ಸಂತ್ರಸ್ತರ ಜತೆಗೆ ಸಭೆ ನಡೆಸಲು ಸಚಿವರು‌ ನಿರ್ಧರಿಸಿದ್ದರು. ಆದರೆ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಸಭೆ ರದ್ದುಗೊಳಿಸಲಾಯಿತು.

ಸಭೆ ಹಿನ್ನೆಲೆಯಲ್ಲಿ ಶಾಸಕಿ‌ ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರ ಮೃನಾಲ್ ಹೆಬ್ಬಾಳ್ಕರ್​​ ನೇತೃತ್ವದಲ್ಲಿ ರೈತರು ಡಿಸಿ ಕಚೇರಿಗೆ‌ ಆಗಮಿಸಿದ್ದರು. ಸಭೆ ರದ್ದಾದ ಹಿನ್ನೆಲೆಯಲ್ಲಿ ಇನ್ನೆರಡು‌ ದಿನಗಳ ನಂತರ ಸಭೆ ಸೇರಲು ರೈತರು‌ ನಿರ್ಧರಿಸಿದರು.

ABOUT THE AUTHOR

...view details