ಕರ್ನಾಟಕ

karnataka

ETV Bharat / state

ಇಂಗಳಿಯಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ - Chikkodi_sanjay

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ‌ ಸಹಕಾರಿ ಸಂಸ್ಥೆ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಕೃಷಿಗಾಗಿ ಸಾಲ ಪಡೆದು ಬಳಿಕ ಅದನ್ನು ತೀರಿಸಲಾಗದೆ ಮನನೊಂದ ರೈತ ನೇಣಿಗೆ ಕೊರಳೊಡ್ಡಿದ್ದಾನೆ.

ರೈತ ಮಹಾದೇವ ಶಿವಪ್ಪ ಅಂಬಿ

By

Published : Jul 4, 2019, 5:06 PM IST

ಚಿಕ್ಕೋಡಿ: ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ‌ ನಡೆದಿದೆ.

ರೈತ ಮಹಾದೇವ ಶಿವಪ್ಪ ಅಂಬಿ

ಮಹಾದೇವ ಶಿವಪ್ಪ ಅಂಬಿ (48) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಈತ ಇಂಗಳಿ ಗ್ರಾಮದ ಸಹಕಾರಿ ಸಂಸ್ಥೆ ಹಾಗೂ ಇನ್ನಿತರ ಹಣಕಾಸು​ ಸಂಸ್ಥೆಗಳಲ್ಲಿ ಕೃಷಿಗೆ ಸಾಲ ಪಡೆದಿದ್ದ. ಇದಕ್ಕಾಗಿ ಮಾಡಿರುವ ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ತಿಳಿಸಿದ್ದಾರೆ.

ಈ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details