ಬೆಳಗಾವಿ:ಲಕ್ಷಾಂತರ ರೂಪಾಯಿ ಮೌಲ್ಯದ ಆಲೂಗಡ್ಡೆ ಬೆಳೆ ಮಳೆಯಿಂದ ಕೊಳೆತ ಹಿನ್ನೆಲೆಯಲ್ಲಿ ಮನನೊಂದ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಗೋಜಗಾ ಗ್ರಾಮದ ರೈತ ಅಶೋಕ ಬಾಮನೆ (59) ನೇಣಿಗೆ ಶರಣಾದ ರೈತ. ಮುಂಗಾರ ಮಳೆ ಚೆನ್ನಾಗಿ ಬಂದ ಪರಿಣಾಮ ರೈತ ತನ್ನ 6 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ. ಬಂಡವಾಳ ಹಾಕಿ 55 ಚೀಲ ಆಲೂಗೆಡ್ಡೆ ಖರೀದಿಸಿ ಬೆಳೆ ಬೆಳೆದ್ದ.