ಕರ್ನಾಟಕ

karnataka

By

Published : Sep 26, 2021, 12:16 PM IST

ETV Bharat / state

ಸಿಎಂ ಭಾಷಣ ವೇಳೆ ಬಾದಾಮಿ ಹಾಲು ನೀಡಲು ಬಂದ ಹಾವೇರಿ ಅಭಿಮಾನಿ

ಸಿಎಂ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಬಾದಾಮಿ ಹಾಲಿನ ಬಾಟಲ್ ನೀಡಲು‌ ಬಂದ ಅಭಿಮಾನಿಯನ್ನು ಪೊಲೀಸರು ತಡೆದರು. ಆದರೆ ಆತನಿಗೆ ವೇದಿಕೆ ಮೇಲೆ ಬರಲು ಅನುವು ಮಾಡಿಕೊಡುವಂತೆ ಸಿಎಂ ಸೂಚಿಸಿ ಆತ ತಂದಿದ್ದ ಬಾದಾಮಿ ಹಾಲನ್ನು ಸ್ವೀಕರಿಸಿದರು.

fan-from-haveri-came-with-badam-drink-to-give-cm-bommai
ಸಿಎಂ ಭಾಷಣ ವೇಳೆ ಬಾದಾಮಿ ಹಾಲು ನೀಡಲು ಬಂದ ಹಾವೇರಿ ಅಭಿಮಾನಿ

ಬೆಳಗಾವಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿಮಾನಿಯೊಬ್ಬ ಬಾದಾಮಿ ಹಾಲು ನೀಡಿ ಸತ್ಕರಿಸಿದ್ದಾನೆ. ಬೆಳಗಾವಿಯಲ್ಲಿ ಅತ್ಯಾಧುನಿಕ ರವೀಂದ್ರ ಕೌಶಿಕ್ ಇ-ಗ್ರಂಥಾಲಯ ಉದ್ಘಾ‌ಟನೆ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸುವ ಮುನ್ನ ಅಭಿಮಾನಿ ವೇದಿಕೆಗೆ ಆಗಮಿಸಿ ಬಾದಾಮಿ ಹಾಲು ನೀಡಿದ್ದಾನೆ.

ಸಿಎಂ ಭಾಷಣ ವೇಳೆ ಬಾದಾಮಿ ಹಾಲು ನೀಡಲು ಬಂದ ಹಾವೇರಿ ಅಭಿಮಾನಿ

ಇಲ್ಲಿನ ಶಿವಾಜಿ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಬಾದಾಮಿ ಹಾಲಿನ ಬಾಟಲ್ ನೀಡಲು‌ ಬಂದ ಅಭಿಮಾನಿಯನ್ನು ಪೊಲೀಸರು ತಡೆದರು. ಬಳಿಕ ಸಿಎಂ ಆತನಿಗೆ ಮೇಲೆ ಬರಲು ಬಿಡಿ ಎಂದು ಸೂಚಿಸಿದ್ದು, ಅಭಿಮಾನಿ ನೀಡಿದ ಹಾಲಿನ ಬಾಟಲ್ ಸ್ವೀಕರಿಸಿದರು.

ಬಳಿಕ ಮಾತನಾಡಿದ ಸಿಎಂ, ನಾನು ಉತ್ತರ ಕರ್ನಾಟಕ ಭಾಗಕ್ಕೆ ಹೋದಾಗಲೆಲ್ಲಾ ಆತ ಬರುತ್ತಾನೆ. ಹಾವೇರಿ ಮೂಲದ ಬೆಳಗಾವಿ ನಿವಾಸಿ ಅಶೋಕ್ ತಡಪಟ್ಟಿ ಬಾದಾಮಿ ಹಾಲು ತಂದುಕೊಡುತ್ತಿರುತ್ತಾರೆ ಎಂದರು.

ಓದಿ:ಬೆಂಗಳೂರಿನಲ್ಲಿ ಕಾರು ಅಪಘಾತ: ಡ್ರಂಕ್ & ಡ್ರೈವ್ ಶಂಕೆ-ಚಾಲಕ ಪೊಲೀಸ್ ವಶಕ್ಕೆ

For All Latest Updates

ABOUT THE AUTHOR

...view details