ಕರ್ನಾಟಕ

karnataka

ETV Bharat / state

ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿದೆ : ಅಮರೇಶ್ವರ ಮಹಾರಾಜ

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಅರ್ಬನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಸ್ಥೆಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಭಾರತ ಸೇವಾದಳದ ವತಿಯಿಂದ ರಾಜ್ಯ ಮಟ್ಟದ ಶಾಖಾ ನಾಯಕ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಯ್ಕೆಯಾದವರಿಗೆ ಅಮರೇಶ್ವರರು ಪ್ರಶಸ್ತಿ ವಿತರಿಸಿದರು.

By

Published : Sep 14, 2019, 10:12 PM IST

ಅಮರೇಶ್ವರ ಮಹಾರಾಜ

ಚಿಕ್ಕೋಡಿ :ದೇಶದ ಆರ್ಥಿಕ ಸ್ಥಿತಿ ಗತಿ ಕುಗ್ಗಿದೆ ಸಹಕಾರಿ ಹಣಕಾಸು ಸಂಸ್ಥೆಗಳು ಸಂಕಷ್ಟದಲ್ಲಿವೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಅರ್ಬನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಸ್ಥೆಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಭಾರತ ಸೇವಾದಳದ ವತಿಯಿಂದ ರಾಜ್ಯ ಮಟ್ಟದ ಶಾಖಾ ನಾಯಕ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಆಯ್ಕೆಯಾದವರಿಗೆ ಅಮರೇಶ್ವರರು ಪ್ರಶಸ್ತಿ ವಿತರಿಸಿದರು.

ಕೌಲಗುಡ್ಡದ ಅಮರೇಶ್ವರ ಮಹಾರಾಜರು

ಬಳಿಕ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿತಿಗತಿ ಕುಂಟಿತಗೊಳ್ಳುತ್ತಿದ್ದು, ಇಂತಹ ಹೀನಾಯ ಸ್ಥಿತಿಯಲ್ಲಿ ಅರಿಹಂತ ಸಂಸ್ಥೆ ಪುಟ್ಟ ಹಳ್ಳಿಯಲ್ಲಿ ಹುಟ್ಟಿಕೊಂಡು ಪಟ್ಟಣದಲ್ಲಿರುವ ಸಂಸ್ಥೆಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿದೆ. ಇದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಮತ್ತು ಸಿಬ್ಬಂದಿಯ ಪ್ರಾಮಾಣಿಕ ಕರ್ತವ್ಯ ಕಾರಣವಾಗಿದೆ. ಹಣಕಾಸು ವ್ಯವಹಾರದೊಂದಿಗೆ ಸಾಮಾಜಿಕವಾಗಿ ಉತ್ತಮ ಕಾರ್ಯ ಮಾಡಿದ ಜನರನ್ನು ಗುರುತಿಸಿ ಪ್ರಶಂಸೆ ನೀಡಿ ಗೌರವಿಸುವ ಕಾರ್ಯ ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಬೆಳಗಾವಿ ಸರ್ಕಾರಿ ತೋಟದ ಶಾಲೆಯ ಪ್ರಧಾನ ಗುರುಗಳಾದ ಬಿ. ಬಿ. ಚೌಗಲಾ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಅತ್ಯುತ್ತಮ ಶಾಖಾ ಸಿಬ್ಬಂದಿಗಳನ್ನು ಸತ್ಕರಿಸಿ ಅಭಿನಂದಿಸಿದರು.

ABOUT THE AUTHOR

...view details