ಕರ್ನಾಟಕ

karnataka

ETV Bharat / state

ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ: ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ನೆರೆ ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರ, ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿ, ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂಬ ಪಾದಯಾತ್ರೆಯನ್ನು ಬೆಳಗಾವಿಯ ಅಥಣಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

By

Published : Oct 19, 2019, 5:46 AM IST

ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಅಥಣಿ:ಕೃಷ್ಣಾ ನದಿಪ್ರವಾಹ ಬಂದು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದ್ರು ಮುಳುಗಡೆಯಾದ ಹಾಗೂ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿನ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಸಂತ್ರಸ್ತರು ಹಮ್ಮಿಕೊಂಡಿದ್ದರು.

ಸಂತ್ರಸ್ತರಿಗೆ ಶಾಸ್ವತ ಪುನರ್ವಸತಿ, ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು. ಅಥಣಿ ತಾಲೂಕಿನ ಕೃಷ್ಣಾ ನದಿತೀರದ ಪ್ರವಾಹ ಪೀಡಿತ ಎಲ್ಲ ಗ್ರಾಮಗಳ ನೆರೆ ಸಂತ್ರಸ್ತರು ದರೂರ ಸೇತುವೆಯಿಂದ ಅಥಣಿ ತಹಶಿಲ್ದಾರ್​​​ ಕಚೇರಿಯವರೆಗೆ ''ಬದುಕಿಸಿ ಇಲ್ಲವೇ ಮುಳುಗಿಸಿ'' ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ ಎಂದು ಪಾದಯಾತ್ರೆಯನ್ನು ಮಾಡಿದ್ರು.

ಅಂಬೇಡ್ಕರ್​​ ಹಾಗೂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಚಾಲನೆ ನೀಡಿದರು. ಪಾದಯಾತ್ರೆಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ವಾದ ಮತ್ತು ರೈತ ಪರ ಸಂಘಟನೆ ಸೇರಿದಂತೆ ನೂರಾರು ಮಹಿಳೆಯರು ಸೇರಿ ಐದು ನೂರಕ್ಕೂ ಅಧಿಕ ಸಂತ್ರಸ್ತರು ಭಾಗಿಯಾಗಿದ್ದರು.ಅಥಣಿ ಅಂಬೇಡ್ಕರ್ ವೃತ್ತದ ರಸ್ತೆ ತಡೆ ಮಾಡಿ ರಸ್ತೆಯಲ್ಲಿ ಕೆಲಹೊತ್ತು ಮಲಗಿ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ಪಾದಯಾತ್ರೆ ನಡೆಸಿದ ನೆರೆ ಸಂತ್ರಸ್ತರು

ಇನ್ನೂ ಪಾದಯಾತ್ರೆ ಮೂಲಕ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶಿಲ್ದಾರ್​​ ಕಚೇರಿಗೆ ತೆರಳಿ ಮನೆಗಳ ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡುವುದು ವಿಳಂಬವಾಗುತ್ತಿದೆ. ಮತ್ತೊಮ್ಮೆ ಸರ್ವೇ ಕಾರ್ಯ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಅಥಣಿ ತಹಶಿಲ್ದಾರ್​​ಗೆ ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಚುನಾವಣೆಯಲ್ಲಿ 14 ರ‍್ಯಾಲಿಯಲ್ಲಿ ಭಾಗವಹಿಸಲು ಸಮಯ ಇದೆ. ಅದೇ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಸಂತ್ರಸ್ತರ ಭೇಟಿಗೆ ಸಮಯವಿಲ್ಲ ಎಂದು ಆರೋಪಿಸಿದರು. ಹಾಗೆ ಲಕ್ಷ್ಮಣ್ ಸವದಿ ಕರ್ನಾಟಕದ ಡಿಸಿಎಂ ಅಲ್ಲ, ಮಹಾರಾಷ್ಟ್ರದ ಡಿಸಿಎಂ ಎಂದರು.

ಅಥಣಿ ತಾಲೂಕಿನ ಮಾಜಿ ಶಾಸಕ ಸಹಜಾನ ಡೊಂಗರಗಾವ ಮಾತನಾಡಿ ರಾಜ್ಯ ಮತ್ತು ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ದೊರಕಬೇಕಾಗಿದೆ. ಖಂಡಿತವಾಗಿ ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕೆಲಸ ಮಾಡಬೇಕೆಂದು ಎಂದು ಹೇಳಿದರು.

ABOUT THE AUTHOR

...view details