ಚಿಕ್ಕೋಡಿ: ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಹೋಗಿದ್ದ 13 ವರ್ಷದ ಬಾಲಕನೋರ್ವ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಇಂಗಳಗಾಂವ್ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕನ ಶವ ದೊರೆತಿದೆ.
ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕ ತಿಂಗಳು ಬಳಿಕ ಶವವಾಗಿ ಪತ್ತೆ - ಅಥಣಿ ಪೋಲಿಸ್ ಠಾಣೆ
ಕಳೆದ ಅ.7 ರಂದು ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 13 ವರ್ಷದ ಬಾಲಕ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಅಥಣಿ ತಾಲೂಕಿನ ಇಂಗಳಗಾಂವ್ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕನ ಶವ ದೊರೆತಿದೆ.
![ಭೀಕರ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಬಾಲಕ ತಿಂಗಳು ಬಳಿಕ ಶವವಾಗಿ ಪತ್ತೆ](https://etvbharatimages.akamaized.net/etvbharat/prod-images/768-512-4349265-thumbnail-3x2-sanju.jpg)
ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ ಬಾಲಕನ ಶವ ಪತ್ತೆ
ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಶವವಾಗಿ ಪತ್ತೆ
ಪ್ರವಾಹ ಸಂದರ್ಭದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬಸವರಾಜ್ ಮಾಣಿಕ್ ಕಾಂಬಳೆ (13) ಮೃತ ಬಾಲಕ.ಗದ್ದೆಯ ಮಾಲೀಕ ಅಶೋಕ್ ಮಲ್ಲಗೌಡರ ಇಂದು ಮೇವು ತರಲು ಹೋದಾಗ ಕೊಳೆತ ವಾಸನೆ ಬರುತ್ತಿತ್ತು. ಸ್ಥಳ ಗಮನಿಸಿದಾಗ ಮೃತದೇಹ ಕಂಡು ಗಾಬರಿಯಾಗಿ ಗ್ರಾಮದ ಈ ವಿಷಯ ತಿಳಿಸಿದ್ದರು. ನಂತರ ಅದು ಗ್ರಾಮದ ಬಾಲಕ ಬಸವರಾಜ್ನ ಮೃತದೇಹ ಅನ್ನೋದು ತಿಳಿದುಬಂದಿದೆ.
ಈ ಕುರಿತು ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.