ಕರ್ನಾಟಕ

karnataka

ETV Bharat / state

ಭಾರತದ ಕೊರಾನಾ ವ್ಯಾಕ್ಸಿನ್ ಪ್ರಪಂಚದಲ್ಲಿ ಕ್ರಾಂತಿ ಮಾಡಲಿದೆ: ಡಿಸಿಎಂ ಲಕ್ಷ್ಮಣ್ ಸವದಿ - dcm lakshman savadi reaction about yatnal allgation against vijeyendra

ಬಹುನಿರೀಕ್ಷಿತ ಸ್ವದೇಶಿ ಕೋವ್ಯಾಕ್ಸಿನ್​ ಬಂದಿರುವುದರಿಂದ ತುಂಬಾ ಸಂತೋಷವಾಗಿದೆ ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಥಣಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

dcm lakshman savadi reaction about covid vaccine
ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ

By

Published : Jan 16, 2021, 11:55 AM IST

ಅಥಣಿ: ಕೊರೊವಾ ವ್ಯಾಕ್ಸಿನ್ ಅವನ್ನು ದೇಶಾದ್ಯಂತ ಹಂಚಿಕೆಗೆ ಇವತ್ತು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬಹುನಿರೀಕ್ಷಿತ ಸ್ವದೇಶಿ ಕೋವ್ಯಾಕ್ಸಿನ್​ ಬಂದಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

ಅಥಣಿ ಪಟ್ಟಣದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಇನ್ಮೇಲೆ ಕೊರೊನಾ ಮಹಾಮಾರಿಗೆ ಹೆದರುವ ಅವಶ್ಯಕತೆ ಇಲ್ಲ. ದೇಶದ ಪ್ರಧಾನಿಯವರ ಸತತ ಪ್ರಯತ್ನದಿಂದ ಇದಕ್ಕೆ ಲಸಿಕೆ ಬಂದಿದೆ. ಲಸಿಕೆ ಸಿದ್ಧಪಡಿಸಿದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಹಾಮಾರಿ ತಡೆಯಲು ಮೋದಿಯವರ ಆಸಕ್ತಿಯಿಂದಲೇ ಇಷ್ಟು ಬೇಗನೆ ಕೋ ವ್ಯಾಕ್ಸಿನ್ ಬಂದಿದೆ. ಅದರಲ್ಲೂ ಭಾರತದ ಲಸಿಕೆ ವಿಶ್ವದಲ್ಲಿ ಕ್ರಾಂತಿ ಮಾಡಲಿದೆ ಎಂದು ಹೇಳಿದರು.

ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಸ್ಥಾನ ಪಡೆಯಲು ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಹಣ ನೀಡಬೇಕೆಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಡಿಸಿಎಂ ಸವದಿ ನಿರಾಕರಿಸಿದರು.

ABOUT THE AUTHOR

...view details