ಕರ್ನಾಟಕ

karnataka

ETV Bharat / state

ಕತ್ತಿಗೆ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ರಾಜಕಾರಣವೇ ಕಾರಣವಾಯ್ತಾ? - undefined

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್​ ಕತ್ತಿಗೆ ಬಿಜೆಪಿ ಟಿಕೆಟ್​ ಕೈ ತಪ್ಪಲು ಡಿಸಿಸಿ ಬ್ಯಾಂಕ್​ ರಾಜಕಾರಣ ಕಾರಣವಾಯ್ತೇ ಎಂಬ ಮಾತು ಕೇಳಿಬರುತ್ತಿದೆ.

ರಮೇಶ್​ ಕತ್ತಿ

By

Published : Mar 29, 2019, 11:01 PM IST

ಚಿಕ್ಕೋಡಿ:ಚಿಕ್ಕೋಡಿ ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ಗಾಗಿ ಕತ್ತಿ ಸಹೋದರರು ಹರಸಾಹಸ ಪಡುತ್ತಿದ್ದರು. ಆದರೆ ಕೊನೆಯಲ್ಲಿ ಟಿಕೆಟ್ ಕೈ ತಪ್ಪಿದೆ. ರಮೇಶ್​ ಕತ್ತಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಡಿಸಿಸಿ ಬ್ಯಾಂಕ್ ಚುನಾವಣೆ ಸೋಲು ಕಾರಣವಿರಬಹುದಾ ಎಂಬ ಪ್ರಶ್ನೆ ಹುಟ್ಟಿದೆಯಂತೆ.

ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಸೇರಿ ಹಲವರ ಷಡ್ಯಂತ್ರದಿಂದ ರಮೇಶ್​ ಕತ್ತಿಗೆ ಟಿಕೆಟ್​ ದೊರಕಲಿಲ್ಲ ಅಂತ ಹೇಳಲಾಗುತ್ತಿದೆ. ಲಕ್ಷ್ಮಣ ಸವದಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಾಗೂ ಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಸೋಲಲು ಕತ್ತಿ ಸಹೋದರರು ಹಾಗೂ ಜಾರಕಿಹೊಳಿ ಸಹೋದರರು ಕಾರಣವಂತೆ.

ಈಗ ವಿರೋಧಿಗಳ ಪ್ಲ್ಯಾನ್ ಫ್ಲಾಪ್​ ಮಾಡಲು ಕತ್ತಿ ಸಹೋದರರು ಹೊಸ ತಂತ್ರ ಹೆಣೆಯುತ್ತದ್ದಾರಂತೆ. ಒಟ್ಟಿನಲ್ಲಿ ಈ ಬಾರಿ ಮಹಾಸಮರದಲ್ಲಿ ಚಿಕ್ಕೋಡಿ ಒಂದಲ್ಲ ಇನ್ನೊಂದು ರೀತಿ ಕುತೂಹಲ ಕೆರಳಿಸುತ್ತಿದೆ.

For All Latest Updates

TAGGED:

ABOUT THE AUTHOR

...view details