ಕರ್ನಾಟಕ

karnataka

ETV Bharat / state

ಕೃಷ್ಣ ಬಣ ಬಣ... ಆಹಾರಕ್ಕಾಗಿ ನದಿಯಿಂದ ಗ್ರಾಮಕ್ಕೆ ನುಗ್ಗಿತು ಬೃಹತ್​ ಗಾತ್ರದ ಮೊಸಳೆ

ಕೃಷ್ಣ ನದಿ ತೀರದಲ್ಲಿರುವ ಅಥಣಿ ತಾಲೂಕು ಹುಲಗಬಾಳ ಗ್ರಾಮದ ಮನೆಯೊಳಗೆ ನುಗ್ಗಿಬಂದಿದ್ದ ಬೃಹದಾಕಾರದ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

By

Published : Apr 16, 2019, 9:07 PM IST

ಮೊಸಳೆ

ಚಿಕ್ಕೋಡಿ: ಸಾರ್ವಜನಿಕರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ನೀರಿನಲ್ಲಿ ಇರಬೇಕಾದ ಮೊಸಳೆಗಳು ಜಮೀನುಗಳಿಗೆ ಆಹಾರ ಅರಸಿ ನುಗ್ಗುತ್ತಿವೆ. ಹೀಗಾಗಿ ನದಿ ತೀರದ ತೋಟದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಮೊಸಳೆಯೊಂದು ಸೆರೆಯಾಗಿದೆ.

ನದಿ ತೀರದ ಗ್ರಾಮಗಳಾದ ಸತ್ತಿ, ಸವದಿ, ದರೂರ, ಸಂಕ್ರಟ್ಟಿ, ನದಿ ಇಂಗಳಗಾಂವ್​, ಸಪ್ತಸಾಗರ ಸೇರಿದಂತೆ ಹಲವೆಡೆ ಆಗಾಗ ಮೊಸಳೆಗಳು ಜಮೀನುಗಳಲ್ಲಿ ಪತ್ತೆಯಾಗುತ್ತಿರುವುದು ರೈತರ ನಿದ್ದೆಗೆಡಿಸಿದೆ.

ಹುಲಗಬಾಳ ಗ್ರಾಮದ ಹಿರೇಮಠ ತೋಟದಲ್ಲಿರುವ ವಸತಿಗೆ ನುಗ್ಗಿಬಂದಿದ್ದ ಬೃಹದಾಕಾರದ ಮೊಸಳೆಯನ್ನು ಸಾರ್ವಜನಿಕರು ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಕೃಷ್ಣ ನದಿ ಸಂಪೂರ್ಣ ಬತ್ತಿದ ಪರಿಣಾಮ ಜಲಚರಗಳೂ ಕೂಡ ಆಹಾರ ಮತ್ತು ನೀರು ಸಿಗದೆ ಪರದಾಡುವಂತಾಗಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಸಿಕ್ಕಿರುವ ಮೊಸಳೆಯನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details