ಬೆಳಗಾವಿ:ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಮತ್ತೊಮ್ಮೆ ಬಹುಮತ ನೀಡಿದ್ದರು. ಆದರೆ ಇಂದು ಮಂಡನೆಯಾದ ಕೇಂದ್ರದ ಬಜೆಟ್ ಜನರ ನಿರೀಕ್ಷೆಗಳನ್ನೆಲ್ಲಾ ಹುಸಿಯಾಗಿಸಿದೆ ಎಂದು ಶಾಸಕಿ ಹಾಗೂ ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ಜನರಿಗಿಲ್ಲ ಬಜೆಟ್ನಲ್ಲಿ ಕೊಡುಗೆ: ಲಕ್ಷ್ಮಿ ಹೆಬ್ಬಾಳಕರ್ - undefined
ಪ್ರಸಕ್ತ ಆರ್ಥಿಕ ವರ್ಷದ 8 ತಿಂಗಳ ಬಜೆಟ್ ಮಂಡಿಸುವ ಬದಲು ಮುಂದಿನ 5 ವರ್ಷದ ಯೋಜನೆ ಎನ್ನುವಂತೆ ಬಿಂಬಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನರು ಭ್ರಮನಿರಸನಗೊಳ್ಳುವಂತಾಗಿದೆ- ಹೆಬ್ಬಾಳಕರ್.
![ಸಾಮಾನ್ಯ ಜನರಿಗಿಲ್ಲ ಬಜೆಟ್ನಲ್ಲಿ ಕೊಡುಗೆ: ಲಕ್ಷ್ಮಿ ಹೆಬ್ಬಾಳಕರ್](https://etvbharatimages.akamaized.net/etvbharat/prod-images/768-512-3757368-thumbnail-3x2-lakshmi.jpeg)
ಲಕ್ಷ್ಮಿ ಹೆಬ್ಬಾಳಕರ್
ಜನಸಾಮಾನ್ಯರಿಗೆ ಬಜೆಟ್ನಲ್ಲಿ ಏನೂ ಕೊಟ್ಟಿಲ್ಲ. ಪೆಟ್ರೋಲ್, ಡಿಸೆಲ್, ಆಟೋಮೊಬೈಲ್ ಉಪಕರಣಗಳ ಬೆಲೆಯನ್ನು ಮತ್ತಷ್ಟು ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಿನ ಅಗತ್ಯವಾದ ಉದ್ಯಮ ವಲಯದ ಅಭಿವೃದ್ಧಿಗಾಗಲಿ, ಹೊಸ ಉದ್ಯೋಗ ಸೃಷ್ಟಿಗಾಗಲಿ ಬಜೆಟ್ನಲ್ಲಿ ಕೊಡುಗೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ.