ಕರ್ನಾಟಕ

karnataka

ETV Bharat / state

30 ವರ್ಷ ಪ್ರಾಮಾಣಿಕ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ.. ಗಜಾನನ ಮಂಗಸೂಳಿ - shahajahana gongaraganva

ನಾನು ಕಳೆದ 30 ವರ್ಷಗಳಿಂದ ಪ್ರಾಮಾಣಿಕ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ಎಂದು ಅಥಣಿ ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಹೇಳಿದರು. ಲಕ್ಷ್ಮಣ ಸವದಿ ಅವರಿಗೆ ಕಾಲಿಗೆ ನಮಸ್ಕಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತೀಯ ಸಂಸ್ಕ್ರತಿಯಲ್ಲಿ ಹಿರಿಯರಿಗೆ ಗೌರವಿಸುವುದು ನಮ್ಮ ಸಂಸ್ಕೃತಿ ಎಂದು ಪ್ರತಿಕ್ರಿಯಿಸಿದರು.

ckd

By

Published : Nov 19, 2019, 6:56 PM IST

ಚಿಕ್ಕೋಡಿ:ಅಥಣಿ ಮತಕ್ಷೇತ್ರದ ಉಪಚುನಾವಣೆಗೆ ಹಲವಾರು ಕಾರ್ಯಕರ್ತರು ಟಿಕೆಟ್ ಬೇಡಿದ್ದರು. ಆದರೆ, ನಾನು ಕಳೆದ 30 ವರ್ಷಗಳಿಂದ ಪ್ರಾಮಾಣಿಕ ಕೆಲಸ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ ಎಂದು ಅಥಣಿ ಕಾಂಗ್ರೆಸ್‌ ಅಭ್ಯರ್ಥಿ ಗಜಾನನ ಮಂಗಸೂಳಿ ಹೇಳಿದರು.

ಅಥಣಿ ತಹಶೀಲ್ದಾರ್ ಕಚೇರಿ ಬಳಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ. ಶಹಜಾನ ಡೊಂಗರಗಾಂವ ಅವರು ನಮ್ಮ ರಾಜಕೀಯ ಗುರುಗಳು. ಅವರು ಅಥಣಿ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮೊದಲೇ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈಗ ಟಿಕೆಟ್ ಘೋಷಣೆ ಆಗಿದೆ. ನಮ್ಮ ಪಕ್ಷದ ಹಿರಿಯರು ಅವರ ಜೊತೆ ಮಾತನಾಡುತ್ತಾರೆ. ಅವರು ನನಗೆ ಬೆಂಬಲ ನೀಡುತ್ತಾರೆ ಎಂದು ಹೇಳಿದರು.

ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ..

ಲಕ್ಷ್ಮಣ ಸವದಿ ಅವರಿಗೆ ಕಾಲಿಗೆ ನಮಸ್ಕಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿರಿಯರಿಗೆ ಗೌರವಿಸುವುದು ನಮ್ಮಸಂಸ್ಕೃತಿ. ಅವರು ಎದುರಿಗೆ ಬಂದರು, ಆಗ ನಾನು ಆಶೀರ್ವಾದ ತೆಗೆದುಕೊಂಡೆ. ಅವರಿಗ ಅಷ್ಟೇ ಅಲ್ಲ, ಅಲ್ಲಿರುವ ಎಲ್ಲರಿಗೂ ನಮಸ್ಕಾರ ಮಾಡಿದ್ದೇನೆ. ಅದರಲ್ಲಿ ಏನೂ ಇಲ್ಲ‌ ಎಂದು ಪ್ರತಿಕ್ರಿಯಿಸಿದರು.

ABOUT THE AUTHOR

...view details