ಕರ್ನಾಟಕ

karnataka

By

Published : Oct 16, 2019, 3:01 PM IST

ETV Bharat / state

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ... ಬಿಜೆಪಿಯ ಬೃಹತ್​​ ಸಮಾವೇಶದಲ್ಲಿ ಭಾಗಿ

ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿಯಿಂದ ಹೊರಟ್ಟಿದ್ದ ಸಿಎಂ ಯಡಿಯೂರಪ್ಪ ​ಮಹಾರಾಷ್ಟ್ರ ತಲುಪಿದ್ದು, ಬೃಹತ್​ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ

ಅಥಣಿ/ಬೆಳಗಾವಿ: ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿಯಿಂದ ಸಿಎಂ ಯಡಿಯೂರಪ್ಪ ಹೊರಟ್ಟಿದ್ದ ಹೆಲಿಕಾಪ್ಟರ್​ ಮಹಾರಾಷ್ಟ್ರ ತಲುಪಿದ್ದು, ಜತ್ತದಲ್ಲಿ ಲ್ಯಾಂಡ್​ ಆಗಿದೆ.

ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪನನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡರು ಹಾಗೂ ಬಬಲೇಶ್ವರ ಕ್ಷೇತ್ರದ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ನಂತರ ಸಿಎಂ ಬಿಎಸ್​​ವೈ ಸದ್ಯ ಜತ್ತ ಪಟ್ಟಣದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ರಸ್ತೆ ಮಾರ್ಗದ ಮೂಲಕ ತೆರಳಿದ್ದಾರೆ.

ಮಹಾರಾಷ್ಟ್ರ ತಲುಪಿದ ಸಿಎಂ ಬಿಎಸ್​ವೈ

ಇನ್ನು ಮಹಾರಾಷ್ಟ್ರಕ್ಕೆ ತೆರಳಲು ಸಿಎಂ ನಿನ್ನೆಯೇ ಬೆಳಗಾವಿಗೆ ಬಂದಿದ್ದು, ಇಂದು ಬೆಳಿಗ್ಗೆ ಹೆಲಿಕಾಪ್ಟರ್​ ಬರುವಿಕೆ ತಡವಾಗಿದ್ದರಿಂದ ಸಿಎಂ ವೇಳಾ ಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. 3 ಗಂಟೆ ತಡವಾಗಿ ಮಹಾರಾಷ್ಟ್ರ ತಲುಪಿದ್ದಾರೆ.

ABOUT THE AUTHOR

...view details