ಕರ್ನಾಟಕ

karnataka

By

Published : Jul 25, 2021, 3:40 PM IST

ETV Bharat / state

ಬೆಳಗಾವಿಗೆ ಆಗಮಿಸಿದ ಬಿಎಸ್‌ವೈ: ಅಂತರ ಕಾಯ್ದುಕೊಂಡ ಜಾರಕಿಹೊಳಿ‌ ಬ್ರದರ್ಸ್, ಜೊಲ್ಲೆ ದಂಪತಿ

ಬೆಳಗಾವಿಯ ನೆರೆಹಾನಿ ಪ್ರದೇಶಕ್ಕೆ ಸಿಎಂ ಬಿಎಸ್​​ವೈ ಭೇಟಿ ನೀಡಿದ್ದರು. ಈ ವೇಳೆ ಜಾರಕಿಹೊಳಿ‌ ಬ್ರದರ್ಸ್ ಹಾಗು ಸಚಿವೆ ಶಶಿಕಲಾ ಜೊಲ್ಲೆ ದಂಪತಿ ಬಿಎಸ್‌ವೈ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.

CM BSY visits Belgavi
ಬಿಎಸ್‌ವೈ ಅವರಿಂದ ಅಂತರ ಕಾಯ್ದುಕೊಂಡ ಜಾರಕಿಹೊಳಿ‌ ಬ್ರದರ್ಸ್, ಜೊಲ್ಲೆ ದಂಪ

ಬೆಳಗಾವಿ: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗಾಗಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಗೆ ಬಂದಿದ್ದಾರೆ. ಸಿಎಂ ಬೆಳಗಾವಿಗೆ ಆಗಮಿಸಿದರೂ ಜಾರಕಿಹೊಳಿ‌ ಬ್ರದರ್ಸ್ ಹಾಗು ಜೊಲ್ಲೆ ದಂಪತಿ ಬಿಎಸ್‌ವೈ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಕೆಎಂಎಫ್ ‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಹಾಗು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಬಿಜೆಪಿಯಲ್ಲಿದ್ದಾರೆ. ಇವರಿಬ್ಬರೂ ಸಿಎಂ ಜೊತೆಗಿನ ಹಾನಿ ಪೀಡಿತ ಪ್ರದೇಶಗಳ ಪರಿಶೀಲನೆ ವೇಳೆ ಕಾಣಿಸಲಿಲ್ಲ. ಅಲ್ಲದೇ ನಂತರ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವ ಜನಪ್ರತಿನಿಧಿಗಳ ಸಭೆಯಿಂದ ಈ ಇಬ್ಬರು ದೂರ ಉಳಿದಿದ್ದರು. ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಕೂಡ ಸಭೆಗೆ ಗೈರಾಗಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ ಹಾಗು ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಕೂಡ ಸಿಎಂ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಚಿವೆ ಜೊಲ್ಲೆ ಯಕ್ಸಂಬಾದಲ್ಲಿದ್ದರೂ, ಸಿಎಂ ಸಭೆಗೆ ಹಾಜರಾಗಿರಲಿಲ್ಲ. ಸಿಎಂ ನಿಪ್ಪಾಣಿಗೂ ಭೇಟಿ ನೀಡಿದ್ದರು. ಸ್ಥಳೀಯ ಶಾಸಕಿಯಾಗಿರುವ ಶಶಿಕಲಾ ಜೊಲ್ಲೆ ಮಾತ್ರ ಸಿಎಂ ಅವರಿಂದ ಅಂತರ ಕಾಯ್ದುಕೊಂಡಿದ್ದು ಕುತೂಹಲಕ್ಕೆ ಕಾರಣವಾಯಿತು. ಉಳಿದಂತೆ ಜಿಲ್ಲೆಯ ಎಲ್ಲ ಬಿಜೆಪಿ ಹಾಗು ಕಾಂಗ್ರೆಸ್ ಶಾಸಕರು ಸಭೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ:ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲೂ ಬಿಎಸ್​ವೈ ಫುಲ್​ ಆ್ಯಕ್ಟಿವ್​.. ಬೆಳಗಾವಿ ನೆರೆಹಾನಿ ವೀಕ್ಷಣೆಗೆ ತೆರಳಿದ ಸಿಎಂ

ABOUT THE AUTHOR

...view details