ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದರಿಂದ ಹೊರಬರಲು ಇದೀಗ ನಾಟಿ ವೈದ್ಯರ ಮೊರೆ ಹೋಗಿದ್ದಾರೆ. ಮೈಸೂರು ಮೂಲದ ನಾಟಿವೈದ್ಯ ಲೋಕೇಶ್ ಟೇಕಲ್ ಎಂಬುವರು ಸಿಎಂಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಿಕಿತ್ಸೆ ನೀಡಿದ್ದಾರೆ.
ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿನ ವಿಟಿಯುದ ಗೆಸ್ಟ್ ಹೌಸ್ ನಲ್ಲಿದ್ದರು. ಆಗ ನಾಟಿ ವೈದ್ಯ ಲೋಕೇಶ್ ಟೇಕಲ್ ಸಿಎಂಗೆ 10 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡುತ್ತಿದ್ದ ವಿಡಿಯೋ ಹಾಗೂ ಫೋಟೋಗಳು 'ಈಟಿವಿ ಭಾರತ'ಕ್ಕೆ ಲಭ್ಯವಾಗಿವೆ. ಇನ್ನೂ ಒಂದು ತಿಂಗಳ ಕಾಲ ಸಿಎಂ ಇರುವ ಕಡೆಗೆ ಹೋಗಿ ಲೋಕೇಶ್ ಚಿಕಿತ್ಸೆ ನೀಡಲಿದ್ದಾರೆ.