ಕರ್ನಾಟಕ

karnataka

By

Published : Sep 16, 2019, 10:04 AM IST

Updated : Sep 16, 2019, 10:12 AM IST

ETV Bharat / state

ಡೆಂಘೀ ಜ್ವರಕ್ಕೆ ಪೌರ ಕಾರ್ಮಿಕ ಸಾವು

ಬೆಳಗಾವಿಯ ವಂಟಮೂರಿ ಕಾಲೋನಿ‌ ನಿವಾಸಿ ಅನಿಲ್ ಕಾಂಬಳೆ ಎಂಬುವರು ಡೆಂಘೀ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಡೆಂಗ್ಯೂ ಜ್ವರಕ್ಕೆ ಪೌರ ಕಾರ್ಮಿಕ ಸಾವು

ಬೆಳಗಾವಿ: ಡೆಂಘೀ ಜ್ವರಕ್ಕೆ ತುತ್ತಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಪೌರ ಕಾರ್ಮಿಕ ಚಿಕಿತ್ಸೆ ಫಲಿಸದೇ ‌ಮೃತಪಟ್ಟಿದ್ದಾನೆ.

ಬೆಳಗಾವಿಯ ವಂಟಮೂರಿ ಕಾಲೋನಿ‌ ನಿವಾಸಿ ಅನಿಲ್ ಕಾಂಬಳೆ (28) ಮೃತ ದುರ್ದೈವಿ. ಗುತ್ತಿಗೆ ಆಧಾರದ ‌ಮೇಲೆ‌‌ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಪಾಲಿಕೆ ಕಳೆದ 4 ತಿಂಗಳಿಂದ ಸಂಬಳ‌ ನೀಡಿಲ್ಲ. ಸೂಕ್ತ ಚಿಕಿತ್ಸೆಗೆ ಹಣವಿಲ್ಲದೇ ಅನಿಲ್ ಮೃತಪಟ್ಟಿದ್ದಾನೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ.

ಡೆಂಗ್ಯೂ ಜ್ವರಕ್ಕೆ ಪೌರ ಕಾರ್ಮಿಕ ಸಾವು

ಸಂಬಳ ನೀಡದ ಕಸವಿಲೇವಾರಿ ಗುತ್ತಿಗೆದಾರರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಪೌರ ಕಾರ್ಮಿಕರು‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Last Updated : Sep 16, 2019, 10:12 AM IST

ABOUT THE AUTHOR

...view details