ಬೆಳಗಾವಿ: ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ರನ್ನು ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ವಿರುದ್ಧ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಗರಂ ಆಗಿದ್ದಾರೆ.
ಕೋಬ್ರಾ ಕಮಾಂಡೋ ಬೆನ್ನಿಗೆ ನಿಂತ ಚಕ್ರವರ್ತಿ ಸೂಲಿಬೆಲೆ: ಎಸ್ಪಿ ಅಮಾನತಿಗೆ ಆಗ್ರಹ - ಕೋಬ್ರಾ ಕಮಾಂಡರ್
ಬೆಳಗಾವಿಯಲ್ಲಿ ಕೋಬ್ರಾ ಬೆಟಾಲಿಯನ್ ಕಮಾಂಡೋ ಸಚಿನ್ ಸಾವಂತ್ ಮೇಲಿನ ಹಲ್ಲೆಯನ್ನು ಇಡೀ ರಾಜ್ಯ ಖಂಡಿಸಿದೆ. ಜೊತೆಗೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ಕೂಗು ಕೇಳಿಬಂದಿದೆ. ಈ ನಡುವೆ ಚಿಂತಕ, ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಮಾಂಡೋ ಪರ ನಿಂತ್ತಿದ್ದು, ಬೆಳಗಾವಿ ಎಸ್ಪಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕರಣವನ್ನು ಸರಿಯಾಗಿ ನಿಭಾಯಿಸದ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆ ಪಡೆಯಬೇಕು ಹಾಗೂ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.
ಯೋಧನ ಫೋಟೊ ಹಾಗೂ ಪೊಲೀಸರು ಯೋಧನಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಫೋಟೊಗಳನ್ನು ಚಕ್ರವರ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.