ಚಿಕ್ಕೋಡಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ ಲೈಫ್ ಜಾಕೆಟ್ ಧರಿಸದೆ ಬೋಟ್ನಲ್ಲಿ ಪ್ರಯಾಣ ಬೆಳೆಸಿದ ತಾಲೂಕಿನ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಆಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಕೃಷ್ಣಾ ನದಿ ವೀಕ್ಷಣೆ ಸಂದರ್ಭದಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದಾರೆ.
ಅಪಾಯದ ಮಟ್ಟ ಮೀರಿದ ಕೃಷ್ಣೆ.... ಮಾದರಿಯಾಗಬೇಕಾದ ಅಧಿಕಾರಿಯೇ ನಿರ್ಲಕ್ಷಿಸಿದಾಗ...! - ಜಿಲ್ಲಾಡಳಿತ ತಂಡ
ಚಿಕ್ಕೋಡಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನದಿಗೆ ಹೋದ ಜಿಲ್ಲಾಡಳಿತ ತಂಡ ಲೈಫ್ ಜಾಕೆಟ್ ಧರಿಸದೇ ಬೋಟ್ನಲ್ಲಿ ಪ್ರಯಾಣ ಬೆಳೆಸಿದ ತಾಲೂಕಿನ ಉಪ ವಿಭಾಗಾಧಿಕಾರಿಯಿಂದಲೇ ಕೇರಲೆಸ್ ಆಗಿದೆ.
![ಅಪಾಯದ ಮಟ್ಟ ಮೀರಿದ ಕೃಷ್ಣೆ.... ಮಾದರಿಯಾಗಬೇಕಾದ ಅಧಿಕಾರಿಯೇ ನಿರ್ಲಕ್ಷಿಸಿದಾಗ...!](https://etvbharatimages.akamaized.net/etvbharat/prod-images/768-512-4025754-thumbnail-3x2-vid.jpg)
ಜಿಲ್ಲಾಡಳಿತ ತಂಡ
ತಾಲೂಕಿನ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಹಾಗೂ ವಿಪತ್ತು ನಿರ್ವಹಣಾ ತಂಡದಿಂದಲೇ ಯಡವಟ್ಟಾಗಿದೆ. ಲೈಫ್ ಜಾಕೆಟ್ ಧರಿಸದೇ ಒಂದೇ ಬೋಟ್ನಲ್ಲಿ 20 ಕ್ಕೂ ಹೆಚ್ಚು ಜನ ಪ್ರಯಾಣ ಮಾಡಿದ್ದು, ಎಸಿ, ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು, ಮಹಿಳೆಯರು ಹಾಗೂ ಸಿಬ್ಬಂದಿ ಪ್ರಯಾಣ ಮಾಡಿದ್ದಾರೆ. ಆದರೆ, ಯಾರು ಸಹ ಲೈಫ್ ಜಾಕೆಟ್ ಹಾಕುವ ಗೋಜಿಗೆ ಹೊಗಿಲ್ಲ.
ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗಬೇಕಾದ ಅಧಿಕಾರಿಯಿಂದಲೇ ಕೇರಲೆಸ್
ತಾಲೂಕಿನ ಎ.ಸಿ. ರವೀಂದ್ರ ಹಾಗೂ ತಹಶೀಲ್ದಾರ್ ಸಂತೋಷ ಬಿರಾದಾರ ಲೈಫ್ ಜಾಕೆಟ್ ಧರಿಸಿ ಜನರಿಗೆ ಮಾದರಿಯಾಗಬೇಕಾದ ಅವರೇ ನಿಷ್ಕಾಳಜಿತನ ತೋರಿದ್ದಾರೆ.