ಅಥಣಿ: ಹೋಳಿ ಹಬ್ಬದ ಸಂಭ್ರಮಾಚರಣೆ ವೇಳೆ ಅಪಘಾತ ಸಂಭವಿಸಿ ವ್ಯಕ್ತಿವೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ, ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.
ಬಣ್ಣದ ಆಟಕ್ಕೆ ಓರ್ವ ಬಲಿ... ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರು ಡಿಕ್ಕಿ - ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕಾರು ಡಿಕ್ಕಿ
ಅಥಣಿಯಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ಬಣ್ಣ ಎರಚುವವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
![ಬಣ್ಣದ ಆಟಕ್ಕೆ ಓರ್ವ ಬಲಿ... ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರು ಡಿಕ್ಕಿ ಕಾರು ಡಿಕ್ಕಿ](https://etvbharatimages.akamaized.net/etvbharat/prod-images/768-512-6362596-thumbnail-3x2-yug.jpg)
ಕಾರು ಡಿಕ್ಕಿ
ಗುಂಡೇವಾಡಿ ಗ್ರಾಮದ ನಿವಾಸಿ ಕುಮಾರ ಮುರಗೆಪ್ಪ ಗುರುಪಾದಗೋಳ(34) ಮೃತ ವ್ಯಕ್ತಿ. ಬಣ್ಣ ಎರಚುವವರಿಂದ ತಪ್ಪಿಸಿಕೊಂಡು ಓಡುವ ವೇಳೆ, ಮಹಾರಾಷ್ಟ್ರದ ಜತ್ತ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಮುರಗೆಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.